ಸಿದ್ದರಾಮಯ್ಯ ಅವಹೇಳನಕಾರಿ ಫೇಸ್ ಬುಕ್ ಬರಹ : ಕೆಪಿಸಿಸಿ ಕಾನೂನು ಘಟಕದಿಂದ ಪೊಲೀಸ್ ದೂರು - Karavali Times ಸಿದ್ದರಾಮಯ್ಯ ಅವಹೇಳನಕಾರಿ ಫೇಸ್ ಬುಕ್ ಬರಹ : ಕೆಪಿಸಿಸಿ ಕಾನೂನು ಘಟಕದಿಂದ ಪೊಲೀಸ್ ದೂರು - Karavali Times

728x90

5 August 2020

ಸಿದ್ದರಾಮಯ್ಯ ಅವಹೇಳನಕಾರಿ ಫೇಸ್ ಬುಕ್ ಬರಹ : ಕೆಪಿಸಿಸಿ ಕಾನೂನು ಘಟಕದಿಂದ ಪೊಲೀಸ್ ದೂರು



ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಸೋಂಕಿತರಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಫೇಸ್‍ಬುಕ್‍ನಲ್ಲಿ ಅವಹೇಳನ ಕಾರಿಯಾಗಿ ಬರೆದಿರುವ ಕಿಡಿಗೇಡಿಗಳಾದ ಮಂಜು ಹಾಗೂ ಆನಂದ ಕುಮಾರ್ ಎಂಬವರ ವಿರುದ್ಧ ಕೆಪಿಸಿಸಿ ಕಾನೂನು ಘಟಕದಿಂದ ನ್ಯಾಯವಾದಿ ಮುಕುಂದರಾಜ್ ಅವರು ನಗರದ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ.
 
“ಮತ್ತೆ ಹುಟ್ಟಿ ಬರಬೇಡ, ಬಂದರೂ ಜಾತಿ ಮಾಡಬೇಡ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗೊ ನಾಲಾಯಕ್, ಮೊಟ್ಟೇಲಿ ಮಕ್ಕಳ ಜಾತಿ ಭೇದ ಮಾಡೊ ಭಿಕಾರಿ ಹೋಗು” ಎಂದು ಕಿಡಿಗೇಡಿಗಳು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಮುಕುಂದರಾಜ್ ಅವರು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಬರಹ ಹಾಕಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸದಸ್ಯನನ್ನು ಪೆÇಲೀಸರು ಬಂಧಿಸಿದ್ದರು ಎಂಬುದನ್ನಿಲ್ಲಿ ನೆನಪಿಸಬಹುದು. 






  • Blogger Comments
  • Facebook Comments

0 comments:

Post a Comment

Item Reviewed: ಸಿದ್ದರಾಮಯ್ಯ ಅವಹೇಳನಕಾರಿ ಫೇಸ್ ಬುಕ್ ಬರಹ : ಕೆಪಿಸಿಸಿ ಕಾನೂನು ಘಟಕದಿಂದ ಪೊಲೀಸ್ ದೂರು Rating: 5 Reviewed By: karavali Times
Scroll to Top