ಕೆದಿಲ : ಭಾರೀ ಅಕ್ರಮ ಗಾಂಜಾ ಸಾಗಾಟ ಜಾಲ ಬೇಧಿಸಿದ ಪುತ್ತೂರು ಪೊಲೀಸರು - Karavali Times ಕೆದಿಲ : ಭಾರೀ ಅಕ್ರಮ ಗಾಂಜಾ ಸಾಗಾಟ ಜಾಲ ಬೇಧಿಸಿದ ಪುತ್ತೂರು ಪೊಲೀಸರು - Karavali Times

728x90

11 August 2020

ಕೆದಿಲ : ಭಾರೀ ಅಕ್ರಮ ಗಾಂಜಾ ಸಾಗಾಟ ಜಾಲ ಬೇಧಿಸಿದ ಪುತ್ತೂರು ಪೊಲೀಸರು







 ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ಮಂಗಳವಾರ ಅಕ್ರಮ ಗಾಂಜಾ ಸಾಗಾಟ ನಡೆಸುತ್ತಿದ್ದ ಭಾರೀ ಜಾಲವನ್ನು ಬೇಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಗಾಂಜಾ, ವಾಹನ ಸಹಿತ ಮೂರು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. 

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ, ದೂರ್ಮಕ್ಕಾಡ್ ಆಯಿಷಾ ಮಂಝಿಲ್ ನಿವಾಸಿ ಇಬ್ರಾಹಿಂ ಯಾನೆ ಅರ್ಷದ್ ಯ ಯಾನೆ ಅಚ್ಚು (26), ಮಂಜೇಶ್ವರ-ಹೊಸಂಗಡಿ ಮಜಿರ್‍ಪಳ್ಳ ನಿವಾಸಿ ದಿವಂಗತ ಮುಸ್ತಫಾ ಎಂಬವರ ಪುತ್ರ ಮುಹಮ್ಮದ್ ಶಫೀಕ್ (31), ಬಂಟ್ವಾಳ ತಾಲೂಕು, ಕನ್ಯಾನ ಗ್ರಾಮದ ಮಡಕುಂಜ ಮನೆ ನಿವಾಸಿ ಅಬ್ದುಲ್ಲ ಎಂಬವರ ಪುತ್ರ ಖಲಂದರ್ ಶಾಫಿ (26) ಬಂಧಿತ ಆರೋಪಿಗಳು. 

ಬಂಧಿತರಿಂದ 17 ಲಕ್ಷ 50 ಸಾವಿರ ಮೌಲ್ಯದ ಗಾಂಜಾ, 3 ಲಕ್ಷ ಮೌಲ್ಯದ ಪಿಕಪ್ ಹಾಗೂ 4 ಲಕ್ಷ ರೂಪಾಯಿ ಮೌಲ್ಯದ ಕಾರು ಸಹಿತ ಸುಮಾರು 24 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು  ವಶಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿಗಳ ವಿರುದ್ದ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಕಲಂ 8(ಸಿ) ಆರ್/ಡಬ್ಲ್ಯು 20(ಬಿ) (11)ಸಿ ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ, 

ಆರೋಪಿಗಳ ಪೈಕಿ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು ಎಂಬಾತನ ವಿರುದ್ದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ ಹಾಗೂ ಖಲಂದರ್ ಶಾಫಿ ಎಂಬಾತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ 2 ಅಕ್ರಮ ಗಾಂಜಾ ಪ್ರಕರಣ ಹಾಗೂ  1 ಕೊಲೆ ಯತ್ನ ಪ್ರಕರಣ ಮತ್ತು ಕಾವೂರು ಠಾಣೆಯಲ್ಲಿ 1 ಅಕ್ರಮ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. 








  • Blogger Comments
  • Facebook Comments

0 comments:

Post a Comment

Item Reviewed: ಕೆದಿಲ : ಭಾರೀ ಅಕ್ರಮ ಗಾಂಜಾ ಸಾಗಾಟ ಜಾಲ ಬೇಧಿಸಿದ ಪುತ್ತೂರು ಪೊಲೀಸರು Rating: 5 Reviewed By: karavali Times
Scroll to Top