ರಾಜ್ಯದಲ್ಲಿ ಆಗಸ್ಟ್ 13ರವರೆಗೆ ಭಾರೀ ಮಳೆ ಸಾಧ್ಯತೆ : ಎಚ್ಚರಿಸಿದ ಹವಾಮಾನ ಇಲಾಖೆ - Karavali Times ರಾಜ್ಯದಲ್ಲಿ ಆಗಸ್ಟ್ 13ರವರೆಗೆ ಭಾರೀ ಮಳೆ ಸಾಧ್ಯತೆ : ಎಚ್ಚರಿಸಿದ ಹವಾಮಾನ ಇಲಾಖೆ - Karavali Times

728x90

9 August 2020

ರಾಜ್ಯದಲ್ಲಿ ಆಗಸ್ಟ್ 13ರವರೆಗೆ ಭಾರೀ ಮಳೆ ಸಾಧ್ಯತೆ : ಎಚ್ಚರಿಸಿದ ಹವಾಮಾನ ಇಲಾಖೆ



 ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 13ರವರೆಗೆ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲೂ ಆಗಸ್ಟ್ 9 ರಿಂದ 13ರವರೆಗೆ ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಆಗಸ್ಟ್ 10 ರಂದು ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಸಹ ಆಗಸ್ಟ್ 9 ಹಾಗೂ 10 ರಂದು 2 ದಿನ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಸಲಾಗಿದೆ. 






  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಆಗಸ್ಟ್ 13ರವರೆಗೆ ಭಾರೀ ಮಳೆ ಸಾಧ್ಯತೆ : ಎಚ್ಚರಿಸಿದ ಹವಾಮಾನ ಇಲಾಖೆ Rating: 5 Reviewed By: karavali Times
Scroll to Top