ತಿರುಮಲ ತಿರುಪತಿ ದೇವಸ್ಥಾನದ ಅರ್ಚಕರನ್ನು ಬಲಿ ಪಡೆದ ಕೊರೋನಾ - Karavali Times ತಿರುಮಲ ತಿರುಪತಿ ದೇವಸ್ಥಾನದ ಅರ್ಚಕರನ್ನು ಬಲಿ ಪಡೆದ ಕೊರೋನಾ - Karavali Times

728x90

7 August 2020

ತಿರುಮಲ ತಿರುಪತಿ ದೇವಸ್ಥಾನದ ಅರ್ಚಕರನ್ನು ಬಲಿ ಪಡೆದ ಕೊರೋನಾ

 


ತಿರುಮಲ (ಕರಾವಳಿ ಟೈಮ್ಸ್) : ತಿರುಮಲ ತಿರುಪತಿ ದೇವಸ್ಥಾನದ 48 ವರ್ಷದ ಅರ್ಚಕರೊಬ್ಬರು ಕೋವಿಡ್-19 ಮತ್ತು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೃತ ಅರ್ಚಕ ಇಲ್ಲಿನ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಸ್‌ವಿಐಎಂಎಸ್) ಆಸ್ಪತ್ರೆಯ ಶ್ರೀ ಪದ್ಮಾವತಿ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 


ಮೃತರು ಮಧುಮೇಹ, ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಉಸಿರಾಟದ ತೊಂದರೆಯ ನಂತರ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯುನಲ್ಲಿ ಶೇ 88ರಷ್ಟು ಆಮ್ಲಜನಕ ನೆರವಿನಿಂದಲೇ ಅವರು ಉಸಿರಾಡುತ್ತಿದ್ದರು. 


ಉತ್ತಮ ಮೇಲ್ವಿಚಾರಣೆಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಆದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಸಂಜೆ ವೇಳೆಗೆ ಗಂಟೆಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.



  • Blogger Comments
  • Facebook Comments

0 comments:

Post a Comment

Item Reviewed: ತಿರುಮಲ ತಿರುಪತಿ ದೇವಸ್ಥಾನದ ಅರ್ಚಕರನ್ನು ಬಲಿ ಪಡೆದ ಕೊರೋನಾ Rating: 5 Reviewed By: karavali Times
Scroll to Top