ಸಿಇಟಿ ಫಲಿತಾಂಶ ಒಂದು ದಿನ ಮುಂದಕ್ಕೆ, ಶುಕ್ರವಾರ ಪ್ರಕಟ : ಡಿಸಿಎಂ ಅಶ್ವಥ್ ನಾರಾಯಣ್ - Karavali Times ಸಿಇಟಿ ಫಲಿತಾಂಶ ಒಂದು ದಿನ ಮುಂದಕ್ಕೆ, ಶುಕ್ರವಾರ ಪ್ರಕಟ : ಡಿಸಿಎಂ ಅಶ್ವಥ್ ನಾರಾಯಣ್ - Karavali Times

728x90

19 August 2020

ಸಿಇಟಿ ಫಲಿತಾಂಶ ಒಂದು ದಿನ ಮುಂದಕ್ಕೆ, ಶುಕ್ರವಾರ ಪ್ರಕಟ : ಡಿಸಿಎಂ ಅಶ್ವಥ್ ನಾರಾಯಣ್



ಬೆಂಗಳೂರು (ಕರಾವಳಿ ಟೈಮ್ಸ್) : ಆಗಸ್ಟ್ 20 (ಗುರುವಾರ) ಪ್ರಕಟವಾಗಬೇಕಿದ್ದ ಸಿಇಟಿ ಫಲಿತಾಂಶವನ್ನು ತಾಂತ್ರಿಕ ಕಾರಣಕ್ಕಾಗಿ ಒಂದು ದಿನ ಮುಂದಕ್ಕೆ ಹಾಕಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಕಳೆದ ಜುಲೈ 30 ಮತ್ತು 31ರಂದು ನಡೆದಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಫಲಿತಾಂಶವನ್ನು ಆಗಸ್ಟ್ 21 ರಂದು ಶುಕ್ರವಾರ ಪ್ರಕಟಿಸಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.

ಆಗಸ್ಟ್ 21 ಬೆಳಗ್ಗೆ 11 ಗಂಟೆಗೆ ಸಚಿವರು ಪತ್ರಿಕಾಗೋಷ್ಠಿ ನಡೆಸಲಿದ್ದು, ಶುಕ್ರವಾರ ಮಧ್ಯಾಹ್ನ 12.30ಕ್ಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಲಿದೆ. 

http://karresults.nic.in ಲಿಂಕ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.






  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ ಫಲಿತಾಂಶ ಒಂದು ದಿನ ಮುಂದಕ್ಕೆ, ಶುಕ್ರವಾರ ಪ್ರಕಟ : ಡಿಸಿಎಂ ಅಶ್ವಥ್ ನಾರಾಯಣ್ Rating: 5 Reviewed By: karavali Times
Scroll to Top