ಸರಕಾರ, ಉಸ್ತುವಾರಿ ಸಚಿವರಿಗೇ ಸೆಡ್ಡು ಹೊಡೆದ ಖಾಸಗಿ ಆಸ್ಪತ್ರೆಗಳು : ಸೂಕ್ತ ಕ್ರಮಕ್ಕಾಗಿ ಬಂಟ್ವಾಳ ಡಿ.ವೈ.ಎಫ್.ಐ ಆಗ್ರಹ - Karavali Times ಸರಕಾರ, ಉಸ್ತುವಾರಿ ಸಚಿವರಿಗೇ ಸೆಡ್ಡು ಹೊಡೆದ ಖಾಸಗಿ ಆಸ್ಪತ್ರೆಗಳು : ಸೂಕ್ತ ಕ್ರಮಕ್ಕಾಗಿ ಬಂಟ್ವಾಳ ಡಿ.ವೈ.ಎಫ್.ಐ ಆಗ್ರಹ - Karavali Times

728x90

1 September 2020

ಸರಕಾರ, ಉಸ್ತುವಾರಿ ಸಚಿವರಿಗೇ ಸೆಡ್ಡು ಹೊಡೆದ ಖಾಸಗಿ ಆಸ್ಪತ್ರೆಗಳು : ಸೂಕ್ತ ಕ್ರಮಕ್ಕಾಗಿ ಬಂಟ್ವಾಳ ಡಿ.ವೈ.ಎಫ್.ಐ ಆಗ್ರಹ

 



ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ಸಂಕಷ್ಟದ ಸಮಯದಲ್ಲಿ ಜನ ಒಂದೆಡೆ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಇನ್ನೊಂದೆಡೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಲೂಟಿಗಿಳಿದಿವೆ. ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತ ಚಿಕಿತ್ಸೆ ಪಡೆಯಿರಿ ಎಂದು ಹೇಳಿಕೆ ನೀಡಿದ್ದು ಬಿಟ್ಟರೆ ಇದುವರೆಗೂ ಯಾವುದೇ ಮೆಡಿಕಲ್ ಕಾಲೇಜು ಯಾರಿಗೂ ಆಧಾರ್ ಕಾರ್ಡ್ ತೋರಿಸಿ ಕೋವಿಡ್ ರೋಗಕ್ಕೆ ಚಿಕಿತ್ಸೆ ಕೊಟ್ಟಿರುವುದಿಲ್ಲ. 

ಜಿಲ್ಲೆಯ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಸಚಿವರ ಮಾತಿಗೆ ಬೆಲೆ ಕೊಡದೇ ರಾಜಾರೋಷವಾಗಿ ಕೊರೊನಾ ರೋಗದ ಚಿಕಿತ್ಸೆಯ ನೆಪದಲ್ಲಿ ಜನ ಸಾಮಾನ್ಯರಿಂದ ಹಣ ಲೂಟಿ ಮಾಡುತ್ತಿದೆ. ಇದನ್ನು ಖಂಡಿಸಿ, ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿರಿ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿರಿ ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಗೆ ಒಳಪಡುವ ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು  ಮೇಲ್ದರ್ಜೆಗೇರಿಸಿ ಹಾಗೂ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಆಗ್ರಹಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿ ಡಿವೈಎಫ್‍ಐ ಬಂಟ್ವಾಳ ತಾಲೂಕು ಸಮಿತಿಯಿಂದ  ತಾಲೂಕು ತಹಶೀಲ್ದಾರರÀ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 

ನಿಯೋಗದಲ್ಲಿ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ ಸಲಹೆಗಾರ ರಾಜಾ ಚೆಂಡ್ತಿಮಾರ್, ತಾಲೂಕು ಆಧ್ಯಕ್ಷ ಸುರೆಂದ್ರ ಕೋಟ್ಯಾನ್, ಕಾರ್ಯದರ್ಶಿ ನ್ಯಾಯವಾದಿ ತುಳಸೀದಾಸ್ ವಿಟ್ಲ, ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ನ್ಯಾಯವಾದಿ ಮಹಮ್ಮದ್ ಗಝಾಲಿ ಮೊದಲಾದವರಿದ್ದರು.










  • Blogger Comments
  • Facebook Comments

0 comments:

Post a Comment

Item Reviewed: ಸರಕಾರ, ಉಸ್ತುವಾರಿ ಸಚಿವರಿಗೇ ಸೆಡ್ಡು ಹೊಡೆದ ಖಾಸಗಿ ಆಸ್ಪತ್ರೆಗಳು : ಸೂಕ್ತ ಕ್ರಮಕ್ಕಾಗಿ ಬಂಟ್ವಾಳ ಡಿ.ವೈ.ಎಫ್.ಐ ಆಗ್ರಹ Rating: 5 Reviewed By: karavali Times
Scroll to Top