ಕಾಯಿದೆಗಳ ತಿದ್ದುಪಡಿ ಮಾಡಿದ ಸರಕಾರದ ವಿರುದ್ಧ ಬಲಿಷ್ಟ ಚಳುವಳಿ ನಡೆಸಲು ಒಕ್ಕೂಟ ತೀರ್ಮಾನ - Karavali Times ಕಾಯಿದೆಗಳ ತಿದ್ದುಪಡಿ ಮಾಡಿದ ಸರಕಾರದ ವಿರುದ್ಧ ಬಲಿಷ್ಟ ಚಳುವಳಿ ನಡೆಸಲು ಒಕ್ಕೂಟ ತೀರ್ಮಾನ - Karavali Times

728x90

11 September 2020

ಕಾಯಿದೆಗಳ ತಿದ್ದುಪಡಿ ಮಾಡಿದ ಸರಕಾರದ ವಿರುದ್ಧ ಬಲಿಷ್ಟ ಚಳುವಳಿ ನಡೆಸಲು ಒಕ್ಕೂಟ ತೀರ್ಮಾನ







ಬಂಟ್ವಾಳ, ಸೆ. 11, 2020 (ಕರಾವಳಿ ಟೈಮ್ಸ್) : ರೈತ, ದಲಿತ, ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಬಿ.ಸಿ.ರೋಡಿನಲ್ಲಿ ಶುಕ್ರವಾರ ವಿಚಾರ ಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಂತಕ ಶಿವಸುಂದರ್, ರಾಜ್ಯ ಸರಕಾರವು ದಿಡೀರನೆ ಸುಗ್ರೀವಾಜ್ಞೆಗಳ ಮೂಲಕ ಕಾಯ್ದೆಗಳ ತಿದ್ದುಪಡಿ ಮಾಡಲು ಹೊರಟಿರುವುದು ಜನರ ಪಾಲಿಗೆ ಮರಣ ಶಾಸನವಾಗಿದೆ ಎಂದು ಅಭಿಪ್ರಾಯಪಟ್ಟರು. ಸರಕಾರದ ಈ ನೀತಿಯ ವಿರುದ್ಧ ಎಲ್ಲಾ ಜನಪರ ಸಂಘಟನೆಗಳು ಒಂದಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು. 

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪೆರ್ನಾಂಡಿಸ್ ಆಧ್ಯಕ್ಷತೆ ವಹಿಸಿದ್ದರು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಎ.ಪಿ.ಎಂ.ಸಿ ಕಾಯಿದೆ ಹಾಗೂ ಕಾರ್ಮಿಕ ಕಾಯಿದೆ ತಿದ್ದುಪಡಿ ಬಗ್ಗೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿದರು. 

ಸಿ.ಐ.ಟಿ.ಯು. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಜನಾಭಿವೃದ್ಧಿ ವೇದಿಕೆಯ ಶಬ್ಬೀರ್ ಅಹಮದ್ ವಂದಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಕೆ. ಯಾದವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 












  • Blogger Comments
  • Facebook Comments

0 comments:

Post a Comment

Item Reviewed: ಕಾಯಿದೆಗಳ ತಿದ್ದುಪಡಿ ಮಾಡಿದ ಸರಕಾರದ ವಿರುದ್ಧ ಬಲಿಷ್ಟ ಚಳುವಳಿ ನಡೆಸಲು ಒಕ್ಕೂಟ ತೀರ್ಮಾನ Rating: 5 Reviewed By: karavali Times
Scroll to Top