ಬಂಟ್ವಾಳ, ನ. 18, 2020 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ಸದಸ್ಯ ಮುಹಮ್ಮದ್ ನಂದರಬೆಟ್ಟು ಗೈರು ಹಾಜರಾಗಿ ಅಚ್ಚರಿ ಮೂಡಿಸಿದರೆ, ಬಿಜೆಪಿ ಸದಸ್ಯರು ನಿರೀಕ್ಷೆಯಂತೆ ಸಾಮೂಹಿಕವಾಗಿ ಕಾರ್ಯಕ್ರಮದಿಂದ ದೂರು ಉಳಿದರು. ಎಸ್ಡಿಪಿಐ ಪಕ್ಷದ ನಾಲ್ಕೂ ಮಂದಿ ಸದಸ್ಯರು ಹಾಜರಾಗಿದ್ದರು.
ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಗೈರು ಹಾಜರಾಗುವ ಮೂಲಕ ಸೇರಿದ್ದ ಜನರಿಂದ ಹಲವು ವಿಧ ಅಭಿಪ್ರಾಯ ಹಂಚಿಕೆಗೆ ಕಾರಣರಾದರು. ಬೆಳಿಗ್ಗೆ ಹನ್ನೊಂದು ಗಂಟೆವರೆಗೂ ಪುರಸಭಾ ಕಛೇರಿಯ ತಮ್ಮ ಛೇಂಬರಿನಲ್ಲಿದ್ದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಇನ್ನೇನು ಪದಗ್ರಹಣ ಸಮಾರಂಭ ಆರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಪರಿಸರ ಇಲಾಖೆಯ ಅಧಿಕಾರಿಗಳು ನದಿ ಕಿನಾರೆ ವೀಕ್ಷಣೆಗೆ ಬಂದಿದ್ದಾರೆ. ಅವರ ಜೊತೆ ಸ್ಥಳ ಪರಿಶೀಲನೆ ಇದೆ ಎಂದೇಳಿ ಕಛೇರಿಯಿಂದ ಹೊರ ನಡೆದವರು ಪದಗ್ರಹಣ ಸಮಾರಂಭ ಮುಗಿಯುವವರೆಗೂ ಮರಳಿ ಬಂದಿಲ್ಲ. ಇಂಜಿನಿಯರ್ ಡೊಮೆನಿಕ್ ಡಿ’ಮೆಲ್ಲೋ ಕೂಡಾ ಪದಗ್ರಹಣ ಸಮಾರಂಭದಲ್ಲಿ ಗೈರು ಹಾಜರಾಗಿದ್ದರು. ಉಳಿದಂತೆ ಪುರಸಭಾ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
0 comments:
Post a Comment