ಬೆಂಗಳೂರು ಗಲಭೆ ಪ್ರಕರಣ : ಎಸ್‌ಡಿಪಿಐ-ಪಿಎಫ್‌ಐಗೆ ಸೇರಿದವರೆನ್ನಲಾದ 17 ಮಂದಿ ಬಂಧಿಸಿದ ಎನ್.ಐ.ಎ. - Karavali Times ಬೆಂಗಳೂರು ಗಲಭೆ ಪ್ರಕರಣ : ಎಸ್‌ಡಿಪಿಐ-ಪಿಎಫ್‌ಐಗೆ ಸೇರಿದವರೆನ್ನಲಾದ 17 ಮಂದಿ ಬಂಧಿಸಿದ ಎನ್.ಐ.ಎ. - Karavali Times

728x90

21 December 2020

ಬೆಂಗಳೂರು ಗಲಭೆ ಪ್ರಕರಣ : ಎಸ್‌ಡಿಪಿಐ-ಪಿಎಫ್‌ಐಗೆ ಸೇರಿದವರೆನ್ನಲಾದ 17 ಮಂದಿ ಬಂಧಿಸಿದ ಎನ್.ಐ.ಎ.

 


ಬೆಂಗಳೂರು, ಡಿ. 22, 2020 (ಕರಾವಳಿ ಟೈಮ್ಸ್) : ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್ 11 ರಂದು ನಡೆದ ಗಲಭೆಗೆ ಸಂಬಂಧಿಸಿದಂತೆ ಎನ್.ಐ.ಎ. ಮತ್ತೆ 17 ಮಂದಿಯನ್ನು ಬಂಧಿಸಿದೆ. ಬಂಧಿತರು ಎಸ್.ಡಿ.ಪಿ.ಐ ಹಾಗೂ ಪಿಎಫ್ಐ ಸಂಘಟನೆಗೆ ಸೇರಿದವರು ಎನ್ನಲಾಗಿದೆ. 

ಎಸ್.ಡಿ.ಪಿ.ಐ. ಕೆಜೆ ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಅಹ್ಮದ್, ರುಬಾ ವಕಾಸ್, ನಾಗವಾರ ವಾರ್ಡ್ ಎಸ್.ಡಿ.ಪಿ.ಐ. ಅಧ್ಯಕ್ಷ ಅಬ್ಬಾಸ್ ಆತನ ಸಹಚರರಾದ ಅಜಿಲ್ ಪಾಷಾ, ಇರ್ಫಾನ್ ಖಾನ್ ಮತ್ತು ಅಕ್ಬರ್ ಖಾನ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿದೆ‌ ಎಂದು ತಿಳಿದು ಬಂದಿದೆ.

ಪುಲಕೇಶಿ ನಗರದ ಕಾಂಗ್ರೆಸ್‍ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರಳಿಯ ನವೀನ್ ಕಳುಹಿಸಿದ್ದ ಫೇಸ್ ಬುಕ್ ಪೋಸ್ಟ್ ಹಿನ್ನೆಲೆಯಲ್ಲಿ ಈ ಗಲಭೆ ನಡೆದಿತ್ತು.

 ಕೆ ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಈ ಪ್ರಕರಣ ನಡೆದಿದ್ದರೂ, ಸೆ 21 ರಂದು  ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಕೈಗೆತ್ತಿಕೊಂಡಿತ್ತು.

ಬೆಂಗಳೂರು ಹಿಂಸಾಚಾರಕ್ಕೂ ಮುನ್ನ ಆಗಸ್ಟ್ 11ರ ಸಂಜೆ ಆರೋಪಿಗಳು ಸಭೆ  ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.







  • Blogger Comments
  • Facebook Comments

0 comments:

Post a Comment

Item Reviewed: ಬೆಂಗಳೂರು ಗಲಭೆ ಪ್ರಕರಣ : ಎಸ್‌ಡಿಪಿಐ-ಪಿಎಫ್‌ಐಗೆ ಸೇರಿದವರೆನ್ನಲಾದ 17 ಮಂದಿ ಬಂಧಿಸಿದ ಎನ್.ಐ.ಎ. Rating: 5 Reviewed By: karavali Times
Scroll to Top