ಹೊಸ ವರ್ಷ ಸಂಭ್ರಮದಲ್ಲಿ ಕೊರೋನಾ ಆತಂಕ : ಮಂಗಳೂರು ಬೀಚ್ ಪ್ರವೇಶಕ್ಕೆ ಬ್ರೇಕ್ ಹಾಕಿದ ಡಿಸಿ - Karavali Times ಹೊಸ ವರ್ಷ ಸಂಭ್ರಮದಲ್ಲಿ ಕೊರೋನಾ ಆತಂಕ : ಮಂಗಳೂರು ಬೀಚ್ ಪ್ರವೇಶಕ್ಕೆ ಬ್ರೇಕ್ ಹಾಕಿದ ಡಿಸಿ - Karavali Times

728x90

29 December 2020

ಹೊಸ ವರ್ಷ ಸಂಭ್ರಮದಲ್ಲಿ ಕೊರೋನಾ ಆತಂಕ : ಮಂಗಳೂರು ಬೀಚ್ ಪ್ರವೇಶಕ್ಕೆ ಬ್ರೇಕ್ ಹಾಕಿದ ಡಿಸಿ

 


ಮಂಗಳೂರು, ಡಿ. 30, 2020 (ಕರಾವಳಿ ಟೈಮ್ಸ್) : ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಜನ ಮೈ ಮರೆಯುವ ಹಿನ್ನಲೆಯಲ್ಲಿ‌ ಕೊರೋನಾಘಾತ ಉಂಟಾಗುವ ಭೀತಿಗಾಗಿ ಮಂಗಳೂರಿನ ಕಡಲ‌ ಕಿನಾರೆಗಳಿಗೆ ಪ್ರವಾಸಿಗಳ ಪ್ರವೇಶ ನಿರ್ಬಂಧಿಸಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

ಡಿ. 31 ರ ಮಧ್ಯಾಹ್ನ 2 ಗಂಟೆಯಿಂದ ಜ. 2 ರ ಮಧ್ಯಾಹ್ನ 2 ಗಂಟೆಯವರೆಗೆ ಈ ಬೀಚ್ ಪ್ರವೇಶ ನಿರ್ಬಂಧ ಜಾರಿಯಲ್ಲಿರಲಿದ್ದು, ಮಂಗಳೂರಿನ ಉಳ್ಳಾಲ, ಸೋಮೇಶ್ವರ, ಸಸಿಹಿತ್ಲು, ತಣ್ಣೀರುಬಾವಿ, ಮೊಗವೀರಪಟ್ಣ, ಸುರತ್ಕಲ್, ಪಣಂಬೂರು ಸೇರಿದಂತೆ ನಗರದ ಎಲ್ಲಾ ಬೀಚ್ ಗಳಲ್ಲಿ ಈ ನಿರ್ಬಂಧ ಇರಲಿದೆ. ಸ್ಥಳೀಯರು, ಸಾಂಪ್ರದಾಯಿಕ ಮೀನುಗಾರರು ಹೊರತುಪಡಿಸಿ ಎಲ್ಲಾ ಪ್ರವಾಸಿಗರಿಗೆ ಬೀಚ್ ಪ್ರವೇಶ ನಿಷೇಧಿಸಿ ಡೀಸಿ ಆದೇಶ ಹೊರಡಿಸಿದ್ದಾರೆ.







  • Blogger Comments
  • Facebook Comments

0 comments:

Post a Comment

Item Reviewed: ಹೊಸ ವರ್ಷ ಸಂಭ್ರಮದಲ್ಲಿ ಕೊರೋನಾ ಆತಂಕ : ಮಂಗಳೂರು ಬೀಚ್ ಪ್ರವೇಶಕ್ಕೆ ಬ್ರೇಕ್ ಹಾಕಿದ ಡಿಸಿ Rating: 5 Reviewed By: karavali Times
Scroll to Top