ಬಂಟ್ವಾಳ, ಡಿ. 12, 2020 (ಕರಾವಳಿ ಟೈಮ್ಸ್) : ತಾಲೂಕಿನ ಕರೋಪಾಡಿ ಗ್ರಾಮದ ಸಾರ್ಥಕೋಡಿ ನಿವಾಸಿ ಚಂದಪ್ಪ ಮೂಲ್ಯ ಅವರು ಗುರುವಾರ ರಾತ್ರಿ ಹಠಾತ್ ಆಗಿ ಬಂದ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಗುರುವಾರ ರಾತ್ರಿ 12 ಗಂಟೆಯ ಬಳಿಕ ಹಠಾತ್ ಆಗಿ ಸಿಡಿಲು ಬರಲಾರಂಭಿಸಿದ್ದು, ಸಿಡಿಲಿನ ಆಘಾತಕ್ಕೆ ಚಂದಪ್ಪ ಮೂಲ್ಯ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಸಿಡಿಲಿನ ಆರ್ಭಟಕ್ಕೆ ಚಂದಪ್ಪ ಅವರ ಮನೆಗೂ ಹಾನಿಯಾಗಿದೆ. ವಿದ್ಯುತ್ ಉಪಕರಣಗಳ ಸಹಿತ ಹಲವು ಉಪಕರಣಗಳು ಸುಟ್ಟು ಹೋಗಿವೆ.
0 comments:
Post a Comment