ನಂದಾವರ : ಕಾಂಗ್ರೆಸ್ ಕಾರ್ಯಕರ್ತ ಸಲಾಹುದ್ದೀನ್ ಹೃದಯಾಘಾತದಿಂದ ನಿಧನ - Karavali Times ನಂದಾವರ : ಕಾಂಗ್ರೆಸ್ ಕಾರ್ಯಕರ್ತ ಸಲಾಹುದ್ದೀನ್ ಹೃದಯಾಘಾತದಿಂದ ನಿಧನ - Karavali Times

728x90

16 January 2021

ನಂದಾವರ : ಕಾಂಗ್ರೆಸ್ ಕಾರ್ಯಕರ್ತ ಸಲಾಹುದ್ದೀನ್ ಹೃದಯಾಘಾತದಿಂದ ನಿಧನ

ಬಂಟ್ವಾಳ, ಜ. 16, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ನಂದಾವರ ಮಸೀದಿ ಬಳಿ ನಿವಾಸಿ, ಕಾಂಗ್ರೆಸ್ ಕಾರ್ಯಕರ್ತ ಸಲಾಹುದ್ದೀನ್ ನಂದಾವರ (47) ಅವರು ಹೃದಯಾಘಾತದಿಂದ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ತಾಯಿ ಸಹಿತ ಅಪಾತ ಬಂಧು-ಬಳಗವನ್ನು ಅಗಲಿದ್ದಾರೆ. ಸಲಾಹುದ್ದೀನ್ ನಿಧನಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ, ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸಜಿಪಮುನ್ನೂರು ಗ್ರಾ ಪಂ ಮಾಜಿ ಸದಸ್ಯ ಯೂಸುಫ್ ಕರಂದಾಡಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಂದಾವರ ಮೊದಲಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ನಂದಾವರ : ಕಾಂಗ್ರೆಸ್ ಕಾರ್ಯಕರ್ತ ಸಲಾಹುದ್ದೀನ್ ಹೃದಯಾಘಾತದಿಂದ ನಿಧನ Rating: 5 Reviewed By: karavali Times
Scroll to Top