ಫೆಬ್ರವರಿ 11-25 : ಬಿ ಸಿ ರೋಡಿನಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ ಮೆಗಾ ಕಾರ್ಯಕ್ರಮ - Karavali Times ಫೆಬ್ರವರಿ 11-25 : ಬಿ ಸಿ ರೋಡಿನಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ ಮೆಗಾ ಕಾರ್ಯಕ್ರಮ - Karavali Times

728x90

6 February 2021

ಫೆಬ್ರವರಿ 11-25 : ಬಿ ಸಿ ರೋಡಿನಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ ಮೆಗಾ ಕಾರ್ಯಕ್ರಮ

ಬಂಟ್ವಾಳ, ಫೆ 06, 2021 (ಕರಾವಳಿ ಟೈಮ್ಸ್) : ರಾಜರ್ಷಿ, ಪದ್ಮ ವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಆವರ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕದ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇವುಗಳ ಜಂಟಿ ಆಶ್ರಯದಲ್ಲಿ ಕೃಷಿ ಉತ್ಸವ ಮತ್ತು ಕರಾವಳಿ ಕಲೋತ್ಸವ-2021 ಮೆಗಾ ಕಾರ್ಯಕ್ರಮವು ಫೆಬ್ರವರಿ 11 ರಿಂದ 25ರವರೆಗೆ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಇರುವ ಜೋಡುಮಾರ್ಗ ಉದ್ಯಾನವನದ ಮುಂಭಾಗದ ಗೋಲ್ಡನ್ ಪಾರ್ಕ್ ಮೈದಾನದ ಡಾ ಎ ಪಿ ಜೆ ಅಬ್ದುಲ್ ಕಲಾಂ ವೇದಿಕೆಯಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದರು. ಶನಿವಾರ ಸಂಜೆ ಕಲೋತ್ಸವ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ. 11 ರಂದು ಗುರುವಾರ ಸಂಜೆ 4.30ಕ್ಕೆ ಬಿ ಸಿ ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಮೈದಾನದವರೆಗೆ ವಿವಿಧ ಕಲಾ ತಂಡಗಳ ಸೇರುವಿಕೆಯಲ್ಲಿ ಜಾನಪದ ದಿಬ್ಬಣದ ಮೆರವಣಿಗೆ ನಡೆಯಲಿದ್ದು, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ಉದ್ಘಾಟಿಸುವರು. ಅದೇ ದಿನ ಸಂಜೆ 5.30ಕ್ಕೆ ಕೃಷಿ ಮೇಳ, ಕರಾವಳಿ ಕಲೋತ್ಸವನ್ನು ರಾಜ್ಯ ಮುಜರಾಯಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಡಾ ಎಪಿಜೆ ಅಬ್ದುಲ್ ಕಲಾಂ ವೇದಿಕೆಯನ್ನು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಚಿವ ಎಸ್ ಅಂಗಾರ ಉದ್ಘಾಟಿಸುವರು. ಬಂಟ್ವಾಳ ಶಾಸಕ ಯು ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಿ ರಮಾನಾಥ ರೈ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು. ಮಂಗಳೂರು ಶಾಸಕ ಯು ಟಿ ಖಾದರ್ ಅಮ್ಯೂಸ್‍ಮೆಂಟ್ ಪಾರ್ಕ್ ಉದ್ಘಾಟಿಸುವರು. ಚಿಣ್ಣರ ಲೋಕ ಸೇವಾ ಸಂಸ್ಥೆಯ ಐಸಿರಿ ಕನ್ನಡ ತುಳು ಆಲ್ಬಂ ಗೀತೆಯನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ ಎಂ ಮೋಹನ್ ಆಳ್ವ ಬಿಡುಗಡೆಗೊಳಿಸುವರು. ಈ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಲಿಮ್ಕಾ ದಾಖಲೆಯ ಮುಂಬಯಿ ಕಲಾ ಜಗತ್ತು ಇದರ ಸಂಚಾಲಕ, ಚಲನ ಚಿತ್ರ ನಟ, ನಿರ್ಮಾಪಕ, ನಿರ್ದೇಶಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರಿಗೆ ಕರಾವಳಿ ಕಲಾ ಸೌರಭ ರಾಜ್ಯ ಪ್ರಶಸ್ತಿ ಮತ್ತು ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಕು ದಿಯಾ ರಾವ್ ಕುಂಬ್ಳೆ ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 7 ಗಂಟೆಗೆ ಚಿಣ್ಣರ ಲೋಕ ಸೇವಾ ಟ್ರಸ್ಟ್ ಮಂಗಳೂರು, ಪಾಂಡೇಶ್ವರ ಶ್ರೀ ಮುನೇಶ್ವರ ಮಹಾಗಣಪತಿ ದೇವಸ್ಥಾನ ಶಾಖೆಯ ವಿದ್ಯಾರ್ಥಿಗಳಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು. ಫೆ 12 ರಂದು ಶುಕ್ರವಾರ ಕೃಷಿ ಉತ್ಸವಕ್ಕೆ ಚಾಲನೆ ದೊರಕಲಿದ್ದು, ಬೆಳಗ್ಗೆ 10.30ಕ್ಕೆ ಕೃಷಿ ಸಿರಿ ಕಾರ್ಯಕ್ರಮವನ್ನು ಕುದನೆ ವಾಸುಕಿ ವನ ಧರ್ಮಚಾವಡಿಯ ಶ್ರೀ ವರದರಾಜ್ ಅವರು ಉದ್ಘಾಟಿಸುವರು. ರೈತ ಸಂಘ ಸರಪಾಡಿ ವಲಯಾಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಪ್ರಭಾಕರ ಮಯ್ಯ ನಡ, ಗಣೇಶ್ ಭಟ್ ಎನ್ ಸಿ ರೋಡ್, ಡಾ ನಾಗರಾಜ್, ಜೋ ಪ್ರದೀಪ್ ಡಿಸೋಜ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವರು. ಮಧ್ಯಾಹ್ನ ಜಾನಪದ ಹಾಡುಗಳು, ಬಳಿಕ ಬನಸಿರಿ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಮಹಿಳೆಯರ ಹಾಗೂ ಯುವಕರ ಪಾತ್ರ ವಿಚಾರಗೋಷ್ಠಿ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ ಅಧ್ಯಕ್ಷತೆ ವಹಿಸುವರು. ಸುಶೀಲಾ, ಮನಮೋಹನ ಪುತ್ತೂರು, ಮನೋರಮ ಭಟ್, ಸುಕನ್ಯಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಸಂಜೆ ಚಿಣ್ಣರ ಲೋಕ ವಿದ್ಯಾರ್ಥಿಗಳಿಂದ ಶ್ರೀ ದುರ್ಗಾ ಪರಮೇಶ್ವರಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು. ಫೆ 13 ರಂದು ತಾಂತ್ರಿಕ ಸಿರಿ, ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಅವಿಷ್ಕಾರ ಮತ್ತು ಬಳಕೆ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಉದ್ಘಾಟಿಸುವರು. ಬಂಟ್ವಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರೇಮಾ ಅಧ್ಯಕ್ಷತೆ ವಹಿಸುವರು. ಗಣಪತಿ ಭಟ್, ಗೋವಿಂದ ಪ್ರಸಾದ್, ನಂದನ್ ಶೆಣೈ, ಹರಿದಾಸ್ ಬೆಳ್ತಂಗಡಿ, ರಾಮ ಕಿಶೋರ್ ಮಂಚಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವರು. ಮಧ್ಯಾಹ್ನ ತುಳು ಪದ ಗೊಂಚಿಲ್ ಬಳಿಕ ವನಸಿರಿ, ಕೃಷಿ ಉದ್ಯಮ ಬಗ್ಗೆ ವಿಚಾರಗೋಷ್ಟಿ ನಡೆಯಲಿದೆ. ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಲಿದ್ದು, ಡಾ. ಅವಿನಾಶ್ ಭಟ್, ಡಾ ಚೇತನಾ, ನಿರಂಜನ ಸೇಮಿತ, ರಾಜೇಂದ್ರ ಕಲ್ಭಾವಿ, ಜೋ ಪ್ರದೀಪ್ ಡಿಸೋಜ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವರು. ಸಂಜೆ 4.30ಕ್ಕೆ ಕರಾವಳಿ ದಫ್ ಸ್ಪರ್ಧೆ ನಡೆಯಲಿದ್ದು, ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬಲ್ ಅವರು ಉದ್ಘಾಟಿಸಲಿರುವರು ಎಂದು ಸುದರ್ಶನ್ ಜೈನ್ ಹೇಳಿದರು. ಫೆ 14 ರವಿವಾರ ಮಧ್ಯಾಹ್ನ 2 ಗಂಟೆಗೆ ಕರಾವಳಿ ಸಗಮಪ ಸೀಸನ್-2 ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯ ಮೆಘಾ ಆಡಿಷನ್ ನಡೆಯಲಿದ್ದು, ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಮಾದಕಟ್ಟೆ ಈಶ್ವರ ಭಟ್ ಉದ್ಘಾಟಿಸುವರು. ಸಂಜೆ ಸಭಾ ಕಾರ್ಯಕ್ರಮದಲ್ಲಿ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷತೆ ವಹಿಸುವರು. ಫೆ 15 ರಂದು ಸೋಮವಾರ ಸಂಜೆ 4 ಗಂಟೆಗೆ ಕರಾವಳಿ ಡ್ಯಾನ್ಸ್ ಕರಾವಳಿ ರಾಜ್ಯ ಮಟ್ಟದ ಫಿಲ್ಮ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದ್ದು, ಉಷಾ ಸಮೂಹ ಸಂಸ್ಥೆಯ ವಿಶ್ವನಾಥ ಬಂಟ್ವಾಳ ಉದ್ಘಾಟಿಸುವರು. ಸಂಜೆ ಸಭಾ ಕಾರ್ಯಕ್ರಮದಲ್ಲಿ ಕುಂದಾಪುರ ಉದ್ಯಮಿ ಸುದೀಶ್ ಅಧ್ಯಕ್ಷತೆ ವಹಿಸುವರು. ಫೆ 16 ರಂದು ಮಂಗಳವಾರ ಸಂಜೆ 5 ಗಂಟೆಗೆ ನಾಟಕೋತ್ಸವ ಉದ್ಘಾಟನೆ ನಡೆಯಲಿದ್ದು, ಉದ್ಯಮಿ ನಾಗೇಂದ್ರ ಬಾಳಿಗಾ ಉದ್ಘಾಟಿಸುವರು. ಉದ್ಯಮಿ ವರದರಾಜ್ ಪೈ ಮಾವಿನಕಟ್ಟೆ ಅಧ್ಯಕ್ಷತೆ ವಹಿಸುವರು. ಸತ್ಯ ದೇವತಾ ಕಲಾ ಆರ್ಟ್ಸ್ ಕನಪಾದೆ ತಂಡದಿಂದ ಗೋವಿಂದೆ ಗೊಬ್ಬಯೆ ಸ್ಪರ್ಧಾ ನಾಟಕ ನಡೆಯಲಿದೆ. ಫೆ 17 ರಂದು ಬುಧವಾರ ತಾಂಬೂಲ ಕಲಾವಿದರು ಪುಂಜಾಲಕಟ್ಟೆ ಅವರಿಂದ ಅರ್ಗಂಟ್, ಫೆ 18 ರಂದು ಗುರುವಾರ ಕಲಾನಿಧಿ ಕಲಾವಿದರು ನಾವೂರು ಇವರಿಂದ ಬಲಿಪುಗನ, ಫೆ 19 ಶುಕ್ರವಾರ ರಂಗ ಧರಣಿ ಕಲಾವಿದರು ಕಡೆಗೋಳಿ ಅವರಿಂದ ಗುರು, ಫೆ 20 ಶ£ವಾರ ತೆಲಿಕೆದೆ ಕಲಾವಿದೆರ್ ಕೊಯಿಲ ಅವರಿಂದ ಇನಿಮುಟ್ಟ ಇಂಚಾತಿಜಿ ಸ್ಪರ್ಧಾ ನಾಟಕ ನಡೆಯಲಿದೆ ಎಂದ ಅವರು ಫೆ 21 ರಂದು ರವಿವಾರ ಸಂಜೆ ಕರ್ನಾಟಕ ಸಿಂಗಾರಿ ಮೇಳ ಅಕಾಡೆಮಿ ಮಂಗಳೂರು ಇದರ ಆಶ್ರಯದಲ್ಲಿ ಚೆಂಡೆ ಕಲಾವಿದರ ಸಮಾವೇಶ, ಚೆಂಡೆ ವಿಚಾರ ಗೋಷ್ಠಿ, ಚೆಂಡೆ ಪ್ರದರ್ಶನ ನಡೆಯಲಿದೆ. ಫೆ 22 ರಂದು ಸೋಮವಾರ ಸಂಜೆ 4ಕ್ಕೆ ರಂಗಭೂಮಿ ಕಲಾವಿದರ ಸಮಾವೇಶ ನಡೆಯಲಿದೆ. ಸಂಜೆ ಗಂಟೆ 6 ರಿಂದ ಮೋಕೆದ ಕಲಾವಿದರಿಂದ ಮೋಕೆಡ್ ಒಂತೆ ಜೋಕೆ ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದರು. ಫೆ 23 ರಂದು ಮಂಗಳವಾರ ಸಂಜೆ 3ಕ್ಕೆ ಕರಾವಳಿ ಸರಿಗಮಪ ಸೀಸನ್-2 ಇದರ ಸೆಮಿ ಪೈನಲ್ ಮತ್ತು ಫೈನಲ್ ನಡೆಯಲಿದೆ. ಫೆ 24 ರಂದು ಸಂಜೆ ಗಂಟೆ 5.30ರಿಂದ ರಶೀದ್ ನಂದಾವರ ತಂಡದಿಂದ ಮಾಪುಲೆ ಪಾಟ್ಟ್, ಗಂಟೆ 7 ರಿಂದ ತಾಂಡವ ಡ್ಯಾನ್ಸ್ ಸ್ಟುಡಿಯೋ ಅವರಿಂದ ಫಿಲ್ಮ್ ಡ್ಯಾನ್ಸ್ ನಡೆಯಲಿದೆ. ಫೆ. 25ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕೃಷಿ ಉತ್ಸವ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲು, ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ಪ್ರಶಸ್ತಿ ವಿತರಿಸುವರು. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ರಾತ್ರಿ ಮೋಕೆದ ಕಲಾವಿದರಿಂದ ತೆಲಿಪುವರಾ ಅತ್ತ್ ಬುಲಿಪುವರಾ ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ಸುದರ್ಶನ್ ಜೈನ್ ಸುದ್ದಿಗಾರರಿಗೆ ವಿವರಿಸಿದರು. ಇದೇ ವೇಳೆ ಮಾತನಾಡಿದ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನದಾಸ ಕೊಟ್ಟಾರಿ, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾಟ್ರಸ್ಟ್ (ರಿ)ಸಂಸ್ಥೆಯು ಡಾ ಡಿ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ 2006ರಲ್ಲಿ ಬಂಟ್ವಾಳ ತಾಲೂಕಿನಲ್ಲಿ ಪ್ರಾರಂಭವಾಯಿತು. ಮಕ್ಕಳ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಕ್ಕಳಿಗೆ ಯಕ್ಷಗಾನ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಚೆಂಡೆ ವಾದನ, ನಾಸಿಕ್ ಬ್ಯಾಂಡ್ ವಾದನ ಮೊದಲಾದ ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ನುರಿತ ತರಬೇತುದಾರರಿಂದ ತರಬೇತಿ ನೀಡಿದ್ದು, 5228 ವಿದ್ಯಾರ್ಥಿಗಳು 43 ಶಾಖೆಗಳೊಂದಿಗೆ ತರಬೇತಿ ಪಡೆದಿದ್ದಾರೆ. ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತ ಟೈಲರಿಂಗ್, ಎಂಬ್ರಾಯಿಡರಿ, ಬ್ಯೂಟಿಷಿಯನ್ 15 ವಿಭಾಗದಲ್ಲಿ 638 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಭಿಕ್ಷುಕರನ್ನು ಗುರುತಿಸಿ ನಿರಾಶ್ರಿತರ ಆಶ್ರಮಕ್ಕೆ ಸೇರ್ಪಡೆ ಮಾಡಿರುತ್ತೇವೆ. ಅನಾರೋಗ್ಯ ಪೀಡಿತರಿಗೆ ಧನ ಸಹಾಯ, ನಿರಂತರ ಸಾಂಸ್ಕೃತಿಕ ಬೆಳವಣಿಗೆಯೊಂದಿಗೆ ಸಮಾಜ ಸೇವೆಗೈಯ್ಯುತ್ತಾ ಇದೀಗ 16ನೇ ವರ್ಷದ ಸಂಭ್ರಮದಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ ಎಂಬ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿರುತ್ತೇವೆ. ಮಕ್ಕಳ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿ ಈ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಪಿ ಜಯರಾಂ ರೈ ವಿಟ್ಲ, ಪದಾಧಿಕಾರಿಗಳಾದ ರಿಯಾಝ್ ಹುಸೈನ್ ಬಂಟ್ವಾಳ, ಗೌರವ ಸಲಗೆಗಾರರಾದ ಅಶೋಕ್ ಶೆಟ್ಟಿ ಸರಪಾಡಿ, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಎಚ್ಕೆ ನಯನಾಡು, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಮುಹಮ್ಮದ್ ನಂದರಬೆಟ್ಟು, ಜಯಾನಂದ ಪೆರಾಜೆ, ರತ್ನದೇವ ಪೂಂಜಾಲಟ್ಟೆ, ನಿರ್ದೇಶಕರಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಮುಹಮ್ಮದ್ ನಂದಾವರ, ಚಿಣ್ಣರ ಅಧ್ಯಕ್ಷೆ ಭಾಗ್ಯಶ್ರೀ ಬಿ ಕೆ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಫೆಬ್ರವರಿ 11-25 : ಬಿ ಸಿ ರೋಡಿನಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ ಮೆಗಾ ಕಾರ್ಯಕ್ರಮ Rating: 5 Reviewed By: karavali Times
Scroll to Top