ನೆಲ್ಯಾಡಿ : ಟ್ಯಾಂಕರ್ ಗಳ ನಡುವೆ ಅಪಘಾತ - Karavali Times ನೆಲ್ಯಾಡಿ : ಟ್ಯಾಂಕರ್ ಗಳ ನಡುವೆ ಅಪಘಾತ - Karavali Times

728x90

26 February 2021

ನೆಲ್ಯಾಡಿ : ಟ್ಯಾಂಕರ್ ಗಳ ನಡುವೆ ಅಪಘಾತ

ನೆಲ್ಯಾಡಿ, ಫೆ. 27, 2021 (ಕರಾವಳಿ ಟೈಮ್ಸ್) : ಇಲ್ಲಿನ ಹೊಸಮಜಲು ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿ ಓರ್ವ ಚಾಲಕ ಗಾಯಗೊಂಡ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರು ಕಡೆ ಹೊರಟಿದ್ದರೆ ಡೀಸೆಲ್ ಟ್ಯಾಂಕರ್ ವಿರುದ್ದ ದಿಕ್ಕಿನಿಂದ ಬರುತ್ತಿತ್ತು. ಪೊಸಮಜಲು ಎಂಬಲ್ಲಿ ಚಾಲಕರ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದ್ದು ಡೀಸೆಲ್ ಟ್ಯಾಂಕರ್ ಚಾಲಕ ಗಾಯಗೊಂಡಿದ್ದಾರೆ. ಎರಡೂ ಟ್ಯಾಂಕರ್ ಗಳು ಜಖಂಗೊಂಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ನೆಲ್ಯಾಡಿ : ಟ್ಯಾಂಕರ್ ಗಳ ನಡುವೆ ಅಪಘಾತ Rating: 5 Reviewed By: karavali Times
Scroll to Top