ಕುಖ್ಯಾತ ಕಳ್ಳತನ ಆರೋಪಿ ಕೇರಳದ ಅಶ್ರಫ್ ತಾರಿಗಡ್ಡೆ ಕೊನೆಗೂ ಪುತ್ತೂರು ಪೊಲೀಸರ ಬಲೆಗೆ - Karavali Times ಕುಖ್ಯಾತ ಕಳ್ಳತನ ಆರೋಪಿ ಕೇರಳದ ಅಶ್ರಫ್ ತಾರಿಗಡ್ಡೆ ಕೊನೆಗೂ ಪುತ್ತೂರು ಪೊಲೀಸರ ಬಲೆಗೆ - Karavali Times

728x90

10 February 2021

ಕುಖ್ಯಾತ ಕಳ್ಳತನ ಆರೋಪಿ ಕೇರಳದ ಅಶ್ರಫ್ ತಾರಿಗಡ್ಡೆ ಕೊನೆಗೂ ಪುತ್ತೂರು ಪೊಲೀಸರ ಬಲೆಗೆ

ಪುತ್ತೂರು, ಫೆ. 10, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 2 ವರ್ಷಗಳಂದ ತಲೆಮರೆಸಿಕೊಂಡಿದ್ದ, ವಾರಂಟ್ ಆಸಾಮಿ ಕೇರಳ ಮೂಲದ ಕಳ್ಳತನದ ಕುಖ್ಯಾತಿ ಹೊಂದಿರುವ ಆರೋಪಿ ಅಶ್ರಫ್ ತಾರಿಕಗುಡ್ಡೆ (40) ಎಂಬಾತನನ್ನು ಪೊಲೀಸರು ಕೊನೆಗೂ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಕಾಲಿಗಾವು ತಾಲೂಕಿನ ಪೋಗೋಡಿ, 4 ಸೆನ್ಸ್ ಕಾಲೊನಿ ನಿವಾಸಿಯಾಗಿರುವ ಈತ ಜಿಲ್ಲೆಯ ಪುತ್ತೂರು ನಗರ ಪೆÇಲೀಸ್ ಠಾಣೆ, ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆ, ಉಪ್ಪಿನಂಗಡಿ ಪೆÇಲೀಸ್ ಠಾಣೆ, ಸುಳ್ಯ ಪೆÇಲೀಸ್ ಠಾಣೆ, ಬೆಳ್ಳಾರೆ ಪೆÇಲೀಸ್ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಗಳಲ್ಲಿ ಒಟ್ಟು 18 ವಾರೆಂಟ್ ಹೊಂದಿದ ಕಳ್ಳತನದಲ್ಲಿ ಕುಖ್ಯಾತಿ ಹೊಂದಿದ್ದು, ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನನ್ನು ಪುತ್ತೂರು ಗ್ರಾಮಾಂತರ ಠಾಣಾ ಎಸ್ಸೈ ನೇತೃತ್ವದ ಪೊಲೀಸ್ ತಂಡ ಕೇರಳದ ಮಲಾಪುರಂ ಎಂಬಲ್ಲಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕುಖ್ಯಾತ ಕಳ್ಳತನ ಆರೋಪಿ ಕೇರಳದ ಅಶ್ರಫ್ ತಾರಿಗಡ್ಡೆ ಕೊನೆಗೂ ಪುತ್ತೂರು ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top