ಬಂಟ್ವಾಳ, ಮಾ. 08, 2021 (ಕರಾವಳಿ ಟೈಮ್ಸ್) : ಎರಡು ಕಿಡ್ನಿಗಳನ್ನು ಕಳೆದುಕೊಂಡ ತಾಲೂಕಿನ ಮೊಗರ್ನಾಡು ನಿವಾಸಿ ಸತೀಶ್ ಅವರಿಗೆ ಗ್ಯಾರೇಜು ಮಾಲಕರ ಸಂಘದ ಸದಸ್ಯರು ವೈಯುಕ್ತಿಕ ನೆಲೆಯಲ್ಲಿ ಸಂಗ್ರಹಿಸಿದ 15 ಸಾವಿರ ರೂಪಾಯಿ ಧನಸಹಾಯವನ್ನು ಇತ್ತೀಚೆಗೆ ಭಂಡಾರಿ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ಸಂದರ್ಭ ಹಸ್ತಾಂತರಿಸಿದರು.
ಈ ಸಂಧರ್ಭ ಸಂಘದ ಅಧ್ಯಕ್ಷ ಅಣ್ಣು ಪೂಜಾರಿ, ಪದಾಧಿಕಾರಿಗಳಾದ ಸುಧಾಕರ್ ಸಾಲ್ಯಾನ್, ಸತೀಶ್ ಮೆಲ್ಕಾರ್, ದಯಾನಂದ ಮೊಗರ್ನಾಡು, ರಾಜೇಶ್ ಕುಲಾಲ್, ರಾಜೇಶ್ ಸಾಲ್ಯಾನ್, ಮೊನಂದ ರಂಗೇಲ್, ರಾಮ ಆಲಡ್ಕ ಮೊದಲಾದವರಿ ಉಪಸ್ಥಿತರಿದ್ದರು.
8 March 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment