ಧರ್ಮಸ್ಥಳ, ಮಾ. 09, 2021 (ಕರಾವಳಿ ಟೈಮ್ಸ್) : ಇಲ್ಲಿನ ಪೆÇಲೀಸ್ ಠಾಣಾ ವ್ಯಾಫ್ತಿಯ ಪಟ್ರಮೆ ಗ್ರಾಮದ ಕಾಯಿಲ ಎಂಬಲ್ಲಿ ಸ್ಥಳಿಯ ನಿವಾಸಿ ಲೋಕಯ್ಯ ಗೌಡ (65) ಎಂಬವರ ಜಾಗದಲ್ಲಿದ್ದ ದೂಪದ ಮರ ಕಡಿಯುತ್ತಿದ್ದ ವೇಳೆ ಮರ ಆಕಸ್ಮಿಕವಾಗಿ ಮೈ ಮೇಲೆ ಬಿದ್ದು, ಮೂರು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮರ ಕಡಿಯುತ್ತಿದ್ದ 5 ಜನರ ಪೈಕಿ ಪಟ್ರಮೆ ಗ್ರಾಮದ ನಿವಾಸಿಗಳಾದ ಪ್ರಶಾಂತ್ ಕುಂಬಾರ (23), ಸ್ವಸ್ಥಿಕ್ ಪೂಜಾರಿ (25) ಹಾಗೂ ಉಪ್ಪಿನಂಗಡಿ ನಿವಾಸಿ ಗಣೇಶ್ (38) ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಇಬ್ಬರು ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕರು ಹಾಗೂ ಧರ್ಮಸ್ಥಳ ಠಾಣಾ ಎಸ್ಸೈ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment