ಹಳೆಯಂಗಡಿ : ಸಿಡಿಲು ಬಡಿದು ಆಸ್ಪತ್ರೆ ಸೇರಿದ್ದ ಇನ್ನೋರ್ವ ಬಾಲಕನೂ ಸಾವು - Karavali Times ಹಳೆಯಂಗಡಿ : ಸಿಡಿಲು ಬಡಿದು ಆಸ್ಪತ್ರೆ ಸೇರಿದ್ದ ಇನ್ನೋರ್ವ ಬಾಲಕನೂ ಸಾವು - Karavali Times

728x90

22 April 2021

ಹಳೆಯಂಗಡಿ : ಸಿಡಿಲು ಬಡಿದು ಆಸ್ಪತ್ರೆ ಸೇರಿದ್ದ ಇನ್ನೋರ್ವ ಬಾಲಕನೂ ಸಾವು

ಮಂಗಳೂರು, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ಸಿಡಿಲು ಬಡಿದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಗಂಗಾವತಿ ಮೂಲದ ದುರ್ಗಪ್ಪ ಎಂಬವರ ಪುತ್ರ ಮಾರುತಿ (6) ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾನೆ.

ಹಳೆಯಂಗಡಿ ಸಮೀಪದ ಇಂದಿರಾನಗರ ಮನೆಯಂಗಳದಲ್ಲಿ ಮಂಗಳವಾರ ಸಂಜೆ ಆಟವಾಡುತ್ತಿದ್ದ ಸಂದರ್ಭ ಸಿಡಿಲು ಬಡಿದು ನಿಹಾನ್ ಹಾಗೂ ಮಾರುತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ನಿಹಾನ್ ಬುಧವಾರ ಮೃತಪಟ್ಟಿದ್ದರೆ, ಮಾರುತಿ ಚಿಕಿತ್ಸೆ ಫಲಕಾರಿಯಾಗದೆ ಗುರವಾರ ಮೃತಪಟ್ಟಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಹಳೆಯಂಗಡಿ : ಸಿಡಿಲು ಬಡಿದು ಆಸ್ಪತ್ರೆ ಸೇರಿದ್ದ ಇನ್ನೋರ್ವ ಬಾಲಕನೂ ಸಾವು Rating: 5 Reviewed By: karavali Times
Scroll to Top