ಮಾರ್ಗಸೂಚಿಯಲ್ಲಿ ಮತ್ತೆ ಟೈಟ್ ಮಾಡಿದ ರಾಜ್ಯ ಸರಕಾರ : ಅಗತ್ಯ ಸೇವೆ ಹೊರತುಪಡಿಸಿ ಬಾಕಿ ಎಲ್ಲವೂ ಬಂದ್ - Karavali Times ಮಾರ್ಗಸೂಚಿಯಲ್ಲಿ ಮತ್ತೆ ಟೈಟ್ ಮಾಡಿದ ರಾಜ್ಯ ಸರಕಾರ : ಅಗತ್ಯ ಸೇವೆ ಹೊರತುಪಡಿಸಿ ಬಾಕಿ ಎಲ್ಲವೂ ಬಂದ್ - Karavali Times

728x90

22 April 2021

ಮಾರ್ಗಸೂಚಿಯಲ್ಲಿ ಮತ್ತೆ ಟೈಟ್ ಮಾಡಿದ ರಾಜ್ಯ ಸರಕಾರ : ಅಗತ್ಯ ಸೇವೆ ಹೊರತುಪಡಿಸಿ ಬಾಕಿ ಎಲ್ಲವೂ ಬಂದ್

 ಬೆಂಗಳೂರು, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ಹೆಚ್ಚುತ್ತಿರುವ ಕೋವಿಡ್ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಗುರುವಾರ ತನ್ನ ಆದೇಶವನ್ನು ಮತ್ತೆ ಪರಷ್ಕರಿಸಿದ್ದು, ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕೆಲ್ಲವನ್ನೂ ಬಂದ್ ಮಾಡುವಂತೆ ಆದೇಶಿಸಿದೆ. 

ಮೊಬೈಲ್ ಶಾಪ್, ಟಿವಿ, ಎಲೆಕ್ಟ್ರಾನಿಕ್ ಶೋ ರೂಂ, ಬ್ಯಾಂಗಲ್ಸ್ ಸ್ಟೋರ್, ಚಿನ್ನದ ಅಂಗಡಿ, ಬುಕ್ ಶಾಪ್, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿಗಳು ಸೇರಿದಂತೆ ಎಲ್ಲವನ್ನೂ ಬಂದ್ ಮಾಡುವಂತೆ ಸೂಚಿಸಲಾಗಿದೆ. 

ಹೋಟೆಲ್, ರೆಸ್ಟೋರೆಂಟ್, ಬಾರ್‍ಗಳಲ್ಲಿ ಪಾರ್ಸಲ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಆಟೋ, ಬಸ್, ಮೆಟ್ರೋ ಸೇವೆಗಳು ಲಭ್ಯವಾಗಲಿದೆ. ಬ್ಯಾಂಕ್, ಎಟಿಎಂ, ಇನ್ಶ್ಯೂರೆನ್ಸ್ ಕಂಪನಿ, ಪತ್ರಿಕೆ, ಟಿವಿ ಸೇರಿದಂತೆ ವಿವಿಧ ಮೀಡಿಯಾ ಸಂಸ್ಥೆಗಳು, ಇ-ಕಾಮರ್ಸ್ ಸೇವೆ, ಖಾಸಗಿ ಸೆಕ್ಯೂರಿಟಿ, ಕಟ್ಟಿಂಗ್ ಶಾಪ್, ಬ್ಯೂಟಿ ಪಾರ್ಲರ್‍ಗಳಿಗೆ ಅನುಮತಿಸಿ ಆದೇಶ ನೀಡಲಾಗಿದೆ. ಈ ನೂತನ ಆದೇಶ ಕೂಡಾ ನಿನ್ನೆಯಿಂದಯಿಂದಲೇ ಜಾರಿಯಾಗಲಿದ್ದು, ಮೇ 4 ರವರೆಗೆ ಜಾರಿಯಲ್ಲಿರಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾರ್ಗಸೂಚಿಯಲ್ಲಿ ಮತ್ತೆ ಟೈಟ್ ಮಾಡಿದ ರಾಜ್ಯ ಸರಕಾರ : ಅಗತ್ಯ ಸೇವೆ ಹೊರತುಪಡಿಸಿ ಬಾಕಿ ಎಲ್ಲವೂ ಬಂದ್ Rating: 5 Reviewed By: karavali Times
Scroll to Top