ಬಂಟ್ವಾಳ ನಗರ ಠಾಣಾ ಎಎಸ್ಸೈ ಜಯರಾಮ ರೈ ಹೃದಯಾಘಾತಕ್ಕೆ ಬಲಿ - Karavali Times ಬಂಟ್ವಾಳ ನಗರ ಠಾಣಾ ಎಎಸ್ಸೈ ಜಯರಾಮ ರೈ ಹೃದಯಾಘಾತಕ್ಕೆ ಬಲಿ - Karavali Times

728x90

31 May 2021

ಬಂಟ್ವಾಳ ನಗರ ಠಾಣಾ ಎಎಸ್ಸೈ ಜಯರಾಮ ರೈ ಹೃದಯಾಘಾತಕ್ಕೆ ಬಲಿ


ಬಂಟ್ವಾಳ, ಮೇ 31, 2021 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ಎಎಸೈ, ತಾಲೂಕಿನ ಮಂಚಿ ಗ್ರಾಮದ ನಿವಾಸಿ ಜಯರಾಮ ರೈ (58) ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 


    ಇವರು ಕೆಲ ದಿನಗಳಿಂದ ಬೆನ್ನು ನೋವು ಸಹಿತ ಸಣ್ಣ ಪ್ರಮಾಣದ ಅಸೌಖ್ಯ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತೆ ಸೋಮವಾರ ಬೆಳಿಗ್ಗೆ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 


    ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು ಇತ್ತೀಚೆಗೆ ಬಂಟ್ವಾಳ ನಗರ ಪೆÇೀಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಭಡ್ತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ನಗರ ಠಾಣಾ ಎಎಸ್ಸೈ ಜಯರಾಮ ರೈ ಹೃದಯಾಘಾತಕ್ಕೆ ಬಲಿ Rating: 5 Reviewed By: karavali Times
Scroll to Top