ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ : ಗೋಣಿಬೀಡು ಠಾಣಾ ಎಸ್ಸೈ ಸೇವೆಯಿಂದ ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ಆದೇಶ  - Karavali Times ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ : ಗೋಣಿಬೀಡು ಠಾಣಾ ಎಸ್ಸೈ ಸೇವೆಯಿಂದ ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ಆದೇಶ  - Karavali Times

728x90

23 May 2021

ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ : ಗೋಣಿಬೀಡು ಠಾಣಾ ಎಸ್ಸೈ ಸೇವೆಯಿಂದ ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ಆದೇಶ 

ಮಂಗಳೂರು, ಮೇ 23, 2021 (ಕರಾವಳಿ ಟೈಮ್ಸ್) : ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಠಾಣಾ ಉಪ ನಿರೀಕ್ಷಕ ಅರ್ಜುನ್ ಹೊರಕೇರಿ ಅವರು ದಲಿತ ಯುವಕನನ್ನು ಅಕ್ರಮವಾಗಿ ಬಂಧಿಸಿ ಠಾಣೆಗೆ ಕರೆ ತಂದು ಹಲ್ಲೆ ನಡೆಸಿದ್ದಲ್ಲದೆ ಇನ್ನೊಬ್ಬ ಆರೋಪಿಯ ಮೂತ್ರ ಕುಡಿಸಿ ಅಮಾನವೀಯವಾಗಿ ನಡೆಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣಾ ಎಸ್ಸೈ ವಿರುದ್ದ ಠಾಣೆಯಲ್ಲಿ ದಾಖಲಾಗಿರುವ ದೂರಿನ ಅನ್ವಯ ಅವರನ್ನು ಪಶ್ಚಿಮ ವಲಯ ಐಜಿಪಿ ಅವರು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ್ದಾರೆ. 

 ಅಲ್ಲದೆ ಪ್ರಕರಣದ ಬಗ್ಗೆ ವಿವರವಾದ ಪ್ರಾಥಮಿಕ‌ ತನಿಖಾ ವರದಿಯನ್ನು ಸಲ್ಲಿಸುವಂತೆ ಪುತ್ತೂರು ಉಪ ವಿಭಾಗದ ಎಎಸ್ಪಿ ಅವರಿಗೆ ಪಶ್ಚಿಮ‌ ವಲಯ ಐಜಿಪಿ ಸೂಚಿಸಿದ್ದಾರೆ ದ.ಕ. ಜಿಲ್ಲಾ ಎಸ್ಪಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ : ಗೋಣಿಬೀಡು ಠಾಣಾ ಎಸ್ಸೈ ಸೇವೆಯಿಂದ ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ಆದೇಶ  Rating: 5 Reviewed By: karavali Times
Scroll to Top