ಬಂಟ್ವಾಳ, ಜೂನ್ 28, 2021 (ಕರಾವಳಿ ಟೈಮ್ಸ್) : ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಎಂಬ ಘೋಷಣೆಯೊಂದಿಗೆ, ಕಳೆದ 7 ತಿಂಗಳಿನಿಂದ ದೇಶಾದ್ಯಂತ ನಡೆಯುತ್ತಿರುವ ರೈತರ ಹೋರಾಟಕ್ಕೆ ಶಕ್ತಿ ತುಂಬುವ ಸಲುವಾಗಿ, ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, ಪೆಟ್ರೋಲಿಯಂ ಉತ್ಪನ್ನಗಳ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ದ ವಿದ್ಯುತ್ ದರ ಹೆಚ್ಚಿಸಿದ ರಾಜ್ಯ ಸರಕಾರದ ವಿರುದ್ದ ದೇಶದಾದ್ಯಂತ ನಡೆಯುವ ಪ್ರತಿಭಟನೆಯ ಭಾಗವಾಗಿ ರೈತ, ಕಾರ್ಮಿಕ, ದಲಿತ, ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಗಿ ತಾಲೂಕು ತಹಶಿಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ರಾಜ್ಯ ರೈತ ಸಂಘದ ಬಾಳ್ತಿಲ ವಲಯಾಧ್ಯಕ್ಷ ಸುರೇಂದ್ರ ಕೊರ್ಯ, ಪ್ರಮುಖರಾದ ಆಲ್ವಿನ್ ಲೋಬೋ, ತುಳಸೀದಾಸ್ ವಿಟ್ಲ, ಸಯ್ಯದ್ ರಿಯಾಜ್, ಮೊಜೇಶ್ ಪೂಜಾರಿ, ತಾಬೀಸ್ ವಿಟ್ಲ, ಲಿಯಾಕತ್ ಖಾನ್, ದಿನೇಶ್ ಆಚಾರಿ ಮಾಣಿ, ಡೇನಿಯಲ್ ಎವರೆಸ್ಟ್ ಫ್ರಾಕ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment