ಕ್ವಿಟ್ ಇಂಡಿಯಾ ನೆನಪಿಗಾಗಿ ರೈತರು, ಕಾರ್ಮಿಕರ ಅ 9 ರ ದೇಶವ್ಯಾಪಿ ಪ್ರತಿಭಟನೆಗೆ ಬಂಟ್ವಾಳ ಸಿಐಟಿಯು ಬೆಂಬಲ - Karavali Times ಕ್ವಿಟ್ ಇಂಡಿಯಾ ನೆನಪಿಗಾಗಿ ರೈತರು, ಕಾರ್ಮಿಕರ ಅ 9 ರ ದೇಶವ್ಯಾಪಿ ಪ್ರತಿಭಟನೆಗೆ ಬಂಟ್ವಾಳ ಸಿಐಟಿಯು ಬೆಂಬಲ - Karavali Times

728x90

30 July 2021

ಕ್ವಿಟ್ ಇಂಡಿಯಾ ನೆನಪಿಗಾಗಿ ರೈತರು, ಕಾರ್ಮಿಕರ ಅ 9 ರ ದೇಶವ್ಯಾಪಿ ಪ್ರತಿಭಟನೆಗೆ ಬಂಟ್ವಾಳ ಸಿಐಟಿಯು ಬೆಂಬಲ

ಬಂಟ್ವಾಳ, ಜುಲೈ 30, 2021 (ಕರಾವಳಿ ಟೈಮ್ಸ್) : ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾಪೆರ್Çೀರೇಟ್ ಕಂಪನಿಗಳು ಭಾರತ ಬಿಟ್ಟು ತೊಲಗಿ ಘೋಷಣೆಯಡಿ ರೈತ, ಕಾರ್ಮಿಕ ಹಾಗೂ ಕೂಲಿಕಾರರಿಂದ ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಭಾಗವಾಗಿ ಆಗಸ್ಟ್ 9 ರಂದು ನಡೆಸುವ ದೇಶವ್ಯಾಪಿ ಪ್ರತಿಭಟನೆಗೆ ಬೆಂಬಲಿಸಿರುವ ಸಿಐಟಿಯು ಹಾಗೂ ಅಖಿಲ ಭಾರತ ಕಿಸಾನ್ ಸಭಾ ಕರೆ ನೀಡಿದೆ. 

ಈ ಪ್ರಯುಕ್ತ ಆಗಸ್ಟ್ 9 ರಂದು ಬೆಳಿಗ್ಗೆ 10 ಗಂಟೆಗೆ ಬಿ ಸಿ ರೋಡ್ ಮಿನಿ ವಿಧಾನಸೌಧದ ಮುಂಭಾಗ ರೈತರು ಹಾಗೂ ಕಾರ್ಮಿಕರಿಂದ ಪ್ರತಿಭಟನಾ ಪ್ರದರ್ಶನ ನಡೆಯಲಿದ್ದು, ಇದರ ಪ್ರಚಾರಾರ್ಥವಾಗಿ ಸಿಐಟಿಯು ಬಂಟ್ವಾಳ ತಾಲೂಕು ಪಧಾದಿಕಾರಿಗಳ ಸಭೆ ಗುರುವಾರ ಬಿ ಸಿ ರೋಡಿನಲ್ಲಿ ನಡೆಯಿತು. 

ಸಭೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ಪ್ರಮುಖರಾದ ಉದಯ ಕುಮಾರ್ ಬಂಟ್ವಾಳ, ಈಶ್ವರ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕ್ವಿಟ್ ಇಂಡಿಯಾ ನೆನಪಿಗಾಗಿ ರೈತರು, ಕಾರ್ಮಿಕರ ಅ 9 ರ ದೇಶವ್ಯಾಪಿ ಪ್ರತಿಭಟನೆಗೆ ಬಂಟ್ವಾಳ ಸಿಐಟಿಯು ಬೆಂಬಲ Rating: 5 Reviewed By: karavali Times
Scroll to Top