ಕಾರ್ಮಿಕ ಮಂಡಳಿಯಿಂದ ಕೋವಿಡ್ ಪರಿಹಾರ ಧನ ಒದಗಿಸುವಲ್ಲಿ ಅನ್ಯಾಯ : ಗ್ರಾಮಮಟ್ಟದಲ್ಲಿ ಸಮಿತಿ ರೂಪಿಸಿ ಹೋರಾಟಕ್ಕೆ ಸಜ್ಜಾದ ಕಾರ್ಮಿಕರು - Karavali Times ಕಾರ್ಮಿಕ ಮಂಡಳಿಯಿಂದ ಕೋವಿಡ್ ಪರಿಹಾರ ಧನ ಒದಗಿಸುವಲ್ಲಿ ಅನ್ಯಾಯ : ಗ್ರಾಮಮಟ್ಟದಲ್ಲಿ ಸಮಿತಿ ರೂಪಿಸಿ ಹೋರಾಟಕ್ಕೆ ಸಜ್ಜಾದ ಕಾರ್ಮಿಕರು - Karavali Times

728x90

1 August 2021

ಕಾರ್ಮಿಕ ಮಂಡಳಿಯಿಂದ ಕೋವಿಡ್ ಪರಿಹಾರ ಧನ ಒದಗಿಸುವಲ್ಲಿ ಅನ್ಯಾಯ : ಗ್ರಾಮಮಟ್ಟದಲ್ಲಿ ಸಮಿತಿ ರೂಪಿಸಿ ಹೋರಾಟಕ್ಕೆ ಸಜ್ಜಾದ ಕಾರ್ಮಿಕರು

ಬಂಟ್ವಾಳ, ಆಗಸ್ಟ್ 01, 2021 (ಕರಾವಳಿ ಟೈಮ್ಸ್) : ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ 3 ಸಾವಿರ ರೂಪಾಯಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೀಡಲು ಆದೇಶವಾಗಿದ್ದರೂ ಪರಿಹಾರ ಹಣ ಬೆರಳೆಣಿಕೆಯ ಕಾರ್ಮಿಕರಿಗೆ ಮಾತ್ರ ದೊರೆತಿರುತ್ತದೆ. ಬಹುಪಾಲು ನೋಂದಾಯಿತ ಕಾರ್ಮಿಕರಿಗೆ ಕೋವಿಡ್ ಪರಿಹಾರ ಮೊತ್ತ ಸಿಗದೆ ಅನ್ಯಾಯವಾಗಿದೆ. ಅಲ್ಲದೆ ಕಲ್ಯಾಣ ಮಂಡಳಿಯಿಂದ ಪ್ರತಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಯಾಗಿದ್ದು, ಇದನ್ನು ಕೂಡಾ ಸಮರ್ಪಕವಾಗಿ ಕಾರ್ಮಿಕರಿಗೆ ವಿತರಿಸಲು ಕಾರ್ಮಿಕ ಇಲಾಖೆ ವಿಫಲವಾಗಿದೆ. ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಆಹಾರ ಕಿಟ್ ವಿತರಣೆಯಲ್ಲಿ ಮದ್ಯ ಪ್ರವೇಶಿಸಿ ತಮ್ಮ ಬೆಂಬಲಿಗರಿಗೆ ಮಾತ್ರ ಆಹಾರ ಕಿಟ್ ವಿತರಿಸಿ ನಿಜವಾದ ನೋಂದಾಯಿತ ಕಾರ್ಮಿಕರಿಗೆ ಅನ್ಯಾಯವೆಸಗಲಾಗಿದೆ. ಕೂಡಲೇ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ಧನ ಹಾಗೂ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘ (ಸಿಐಟಿಯು) ವತಿಯಿಂದ ಪ್ರತೀ ಗ್ರಾಮ ಮಟ್ಟದಲ್ಲಿ ಪ್ರತಿಭಟನೆಗೆ ತೀರ್ಮಾನಿಸಲಾಗಿದೆ. 

ಇದರ ಭಾಗವಾಗಿ ಬೋಳಂತೂರಿನಲ್ಲಿ ಕಟ್ಟಡ ಕಾರ್ಮಿಕರ ಸಮಿತಿ ರಚನಾ ಸಭೆ ನಡೆಯಿತು. ಸಭೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಭಾಗವಹಿಸಿ ಮಾತನಾಡಿ ಸಂಘಟನೆಗಳ ಹೋರಾಟದಿಂದ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಿದ್ದು. ಈಗ ಕಲ್ಯಾಣ ಮಂಡಳಿಯ ಹಣವನ್ನು ಸರಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು. ಕಾರ್ಮಿಕರು ಸಂಘಟಿತರಾಗಿ ಈ ಬಗ್ಗೆ ಹೋರಾಟ ನಡೆಸಲು ಇದೇ ವೇಳೆ ಅವರು ಕರೆ ನೀಡಿದರು. 

ಸಭೆಯಲ್ಲಿ ನೂತನ ಗ್ರಾಮ ಸಮಿತಿ ಅದ್ಯಕ್ಷರಾಗಿ ಹನೀಫ್, ಕಾರ್ಯದರ್ಶಿಯಾಗಿ ರಪೀಕ್, ಉಪಾಧ್ಯಕ್ಷರುಗಳಾಗಿ ಸೀನಪ್ಪ ಹಾಗೂ ಸಿದ್ದೀಕ್, ಜೊತೆ ಕಾರ್ಯದರ್ಶಿಗಳಾಗಿ ಮಹೇಶ್ ಹಾಗೂ ಶೆರೀಪ್, ಕೋಶದಿಕಾರಿಯಾಗಿ ಯೂಸುಫ್ ಅವರನ್ನು ಆರಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಾರ್ಮಿಕ ಮಂಡಳಿಯಿಂದ ಕೋವಿಡ್ ಪರಿಹಾರ ಧನ ಒದಗಿಸುವಲ್ಲಿ ಅನ್ಯಾಯ : ಗ್ರಾಮಮಟ್ಟದಲ್ಲಿ ಸಮಿತಿ ರೂಪಿಸಿ ಹೋರಾಟಕ್ಕೆ ಸಜ್ಜಾದ ಕಾರ್ಮಿಕರು Rating: 5 Reviewed By: karavali Times
Scroll to Top