ಕೇರಳ-ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಆ 6ರ ರಾತ್ರಿಯಿಂದ ವಿಧಿಸಿರುವ ವಾರಾಂತ್ಯ ನಿರ್ಬಂಧಕ್ಕೆ ಸರಕಾರದಿಂದ ಪರಿಷ್ಕøತ ಮಾರ್ಗಸೂಚಿ ಬಿಡುಗಡೆ : ಬೆಳಿಗ್ಗೆ 5 ರಿಂದ ಮಧ್ಯಾಹ್ನ 2ರತನಕ ಅಗತ್ಯ ವಸ್ತು ಖರೀದಿಗೆ ಅವಕಾಶ - Karavali Times ಕೇರಳ-ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಆ 6ರ ರಾತ್ರಿಯಿಂದ ವಿಧಿಸಿರುವ ವಾರಾಂತ್ಯ ನಿರ್ಬಂಧಕ್ಕೆ ಸರಕಾರದಿಂದ ಪರಿಷ್ಕøತ ಮಾರ್ಗಸೂಚಿ ಬಿಡುಗಡೆ : ಬೆಳಿಗ್ಗೆ 5 ರಿಂದ ಮಧ್ಯಾಹ್ನ 2ರತನಕ ಅಗತ್ಯ ವಸ್ತು ಖರೀದಿಗೆ ಅವಕಾಶ - Karavali Times

728x90

6 August 2021

ಕೇರಳ-ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಆ 6ರ ರಾತ್ರಿಯಿಂದ ವಿಧಿಸಿರುವ ವಾರಾಂತ್ಯ ನಿರ್ಬಂಧಕ್ಕೆ ಸರಕಾರದಿಂದ ಪರಿಷ್ಕøತ ಮಾರ್ಗಸೂಚಿ ಬಿಡುಗಡೆ : ಬೆಳಿಗ್ಗೆ 5 ರಿಂದ ಮಧ್ಯಾಹ್ನ 2ರತನಕ ಅಗತ್ಯ ವಸ್ತು ಖರೀದಿಗೆ ಅವಕಾಶ

ಬೆಂಗಳೂರು, ಆಗಸ್ಟ್ 06, 2021 (ಕರಾವಳಿ ಟೈಮ್ಸ್) : ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಏರುತ್ತಿರುವ ಕೊರೋನಾ ಪ್ರಕರಣಗಳು ರಾಜ್ಯಕ್ಕೂ ಪರಿಣಾಮ ಬೀರುತ್ತಿರುವುದರಿಂದ ಆಗಸ್ಟ್ 6 ರಾತ್ರಿಯಿಂದ ರಾಜ್ಯ ಸರಕಾರ ವಾರಾಂತ್ಯ ನಿರ್ಬಂಧ ವಿಧಿಸಿದ್ದು, ಈ ಬಗ್ಗೆ ಸರಕಾರ ಪರಿಷ್ಕøತ ಮಾರ್ಗಸೂಚಿ ಬಿಡುಗಡೆ ಮಾಡಿದೆ. 

ಸರಕಾರದ ಪರಿಷ್ಕøತ ಮಾರ್ಗಸೂಚಿ ಪ್ರಕಾರ ಸರಕಾರಿ ಹಾಗೂ 24 ಗಂಟೆ ಕಾರ್ಯಾಚರಿಸುವ ಖಾಸಗಿ ಕೈಗಾರಿಕೆ ಸಹಿತ ಕಂಪೆನಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ನೀಡಲಾಗಿದೆ. ಮಧ್ಯ ವಸ್ತುಗಳನ್ನು ಬೆಳಿಗ್ಗೆ 5 ರಿಂದ ಮಧ್ಯಾಹ್ನ 2ರವರೆಗೆ ಪಾರ್ಸೆಲ್ ಸರ್ವಿಸ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್, ಹೋಂ ಡೆಲಿವರಿಗೆ ಅವಕಾಶ ಕಲ್ಪಿಸಲಾಗಿದೆ. ವಿಮಾನ, ರೈಲು ಸಂಚಾರಕ್ಕೆ ಅನುಮತಿಸಲಾಗಿದೆ. ಟಿಕೆಟ್‍ನೊಂದಿಗೆ ವಿಮಾನ ನಿಲ್ದಾಣ, ರೈಲು ನಿಲ್ದಾಣಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. 

ಮದುವೆ ಹಾಗೂ ಕೌಟುಂಬಿಕ ಕಾರ್ಯಕ್ರಮಗಳನ್ನು 100 ಮಂದಿಗೆ ಮೀರದಂತೆ ನಡೆಸಲು ಅನುಮತಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಜಕೀಯ, ಕ್ರೀಡೆ, ಮನೋರಂಜನೆ, ಸಾಂಸ್ಕೃತಿಕ, ಧಾರ್ಮಿಕ ಮೊದಲಾದ ಎಲ್ಲಾ ರೀತಿಯ ಸಭೆ-ಸಮಾರಂಭಗಳಿಗೆ ಬ್ರೇಕ್ ಹಾಕಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೇರಳ-ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಆ 6ರ ರಾತ್ರಿಯಿಂದ ವಿಧಿಸಿರುವ ವಾರಾಂತ್ಯ ನಿರ್ಬಂಧಕ್ಕೆ ಸರಕಾರದಿಂದ ಪರಿಷ್ಕøತ ಮಾರ್ಗಸೂಚಿ ಬಿಡುಗಡೆ : ಬೆಳಿಗ್ಗೆ 5 ರಿಂದ ಮಧ್ಯಾಹ್ನ 2ರತನಕ ಅಗತ್ಯ ವಸ್ತು ಖರೀದಿಗೆ ಅವಕಾಶ Rating: 5 Reviewed By: karavali Times
Scroll to Top