ಪಾಸಿಟಿವಿಟಿ ದರ ಇಳಿಮುಖ ಹಿನ್ನಲೆ : ವಾರಾಂತ್ಯ ನಿರ್ಬಂಧ ಮುಕ್ತಗೊಳಿಸಿ ರಾಜ್ಯ ಸರಕಾರ ಆದೇಶ  - Karavali Times ಪಾಸಿಟಿವಿಟಿ ದರ ಇಳಿಮುಖ ಹಿನ್ನಲೆ : ವಾರಾಂತ್ಯ ನಿರ್ಬಂಧ ಮುಕ್ತಗೊಳಿಸಿ ರಾಜ್ಯ ಸರಕಾರ ಆದೇಶ  - Karavali Times

728x90

9 September 2021

ಪಾಸಿಟಿವಿಟಿ ದರ ಇಳಿಮುಖ ಹಿನ್ನಲೆ : ವಾರಾಂತ್ಯ ನಿರ್ಬಂಧ ಮುಕ್ತಗೊಳಿಸಿ ರಾಜ್ಯ ಸರಕಾರ ಆದೇಶ 

 ಬೆಂಗಳೂರು, ಸೆಪ್ಟೆಂಬರ್ 10, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಇಳಿಮುಖವಾಗಿರುವ ಹಿನ್ನಲೆಯಲ್ಲಿ  ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹೇರಿದ್ದ ವಾರಾಂತ್ಯ ನಿರ್ಬಂಧ ತೆರವುಗೊಳಿಸಿ ಸರಕಾರ ಆದೇಶಿಸಿದೆ. 

 ವೀಕೆಂಡ್ ಕರ್ಫ್ಯೂ ತೆರವು ಮಾಡಲಾಗಿರುವ ಹಿನ್ನಲೆಯಲ್ಲಿ ಗಡಿ ಜಿಲ್ಲೆಯ ಜನ ಇನ್ನು ಮುಂದೆ ಶನಿವಾರ-ಭಾನುವಾರವೂ ಮುಕ್ತವಾಗಿ ವ್ಯಾಪಾರ-ವಹಿವಾಟು ನಡೆಸಬಹುದು.  ರಾಜ್ಯದ ಸರಾಸರಿ ಪಾಸಿಟಿವಿಟಿ ರೇಟ್ ಶೇ. 0.73ಕ್ಕೆ ಇಳಿದಿದೆ. ವೀಕೆಂಡ್ ಕರ್ಫ್ಯೂ ಹೇರಿಕೆ‌ ಮಾಡಲಾಗಿದ್ದ ಜಿಲ್ಲೆಗಳಲ್ಲಿ ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇದೆ. ಈ‌ ಹಿನ್ನೆಲೆ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲಾಗಿ. 

ಮತ್ತೆ ಸೋಂಕು ಹೆಚ್ಚಳದ ಲಕ್ಷಣಗಳು ಹೆಚ್ಚಾದರೆ ವಾರಾಂತ್ಯ ನಿರ್ಬಂಧ ವಿಧಿಸುವ ಅಧಿಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ ಮಹಾರಾಷ್ಟ್ರ ಮತ್ತು ಕೇರಳದ ಗಡಿ ಜಿಲ್ಲೆಗಳಾದ ಕೊಡಗು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಈ ಮೂಲಕ ವಾರಾಂತ್ಯದಲ್ಲಿ ನಿರ್ಬಂಧದಿಂದ ಮುಕ್ತವಾಗಿವೆ. ಆದರೆ ರಾತ್ರಿ ನಿರ್ಬಂಧ ಮುಂದುವರಿಯಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಸಿಟಿವಿಟಿ ದರ ಇಳಿಮುಖ ಹಿನ್ನಲೆ : ವಾರಾಂತ್ಯ ನಿರ್ಬಂಧ ಮುಕ್ತಗೊಳಿಸಿ ರಾಜ್ಯ ಸರಕಾರ ಆದೇಶ  Rating: 5 Reviewed By: karavali Times
Scroll to Top