ಸಕಾರಣ ತಿಳಿಸದೆ ರಹೀಂ ಉಚ್ಚಿಲ ಅವರ ಬ್ಯಾರಿ ಅಕಾಡೆಮಿ ಅಧ್ಯಕ್ಷ ಪದವಿ ರದ್ದುಗೊಳಿಸಿದ ಸರಕಾರ - Karavali Times ಸಕಾರಣ ತಿಳಿಸದೆ ರಹೀಂ ಉಚ್ಚಿಲ ಅವರ ಬ್ಯಾರಿ ಅಕಾಡೆಮಿ ಅಧ್ಯಕ್ಷ ಪದವಿ ರದ್ದುಗೊಳಿಸಿದ ಸರಕಾರ - Karavali Times

728x90

6 April 2022

ಸಕಾರಣ ತಿಳಿಸದೆ ರಹೀಂ ಉಚ್ಚಿಲ ಅವರ ಬ್ಯಾರಿ ಅಕಾಡೆಮಿ ಅಧ್ಯಕ್ಷ ಪದವಿ ರದ್ದುಗೊಳಿಸಿದ ಸರಕಾರ

ಮಂಗಳೂರು, ಎಪ್ರಿಲ್ 06, 2022 (ಕರಾವಳಿ ಟೈಮ್ಸ್) : ಯಾವುದೇ ಸಕಾರಣ ನೀಡದೆ ರಾಜ್ಯ ಸರಕಾರ ರಹೀಂ ಉಚ್ಚಿಲ್ ಅವರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿ ರದ್ದುಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಬಿಜೆಪಿ ಸರಕಾರದಲ್ಲಿ ರಹೀಂ ಉಚ್ಚಿಲ ಅವರನ್ನು 2ನೇ ಬಾರಿಗೆ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಇದೀಗ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಕೆ ಆರ್ ರಮೇಶ್ ಅವರು ಏಕಾಏಕಿ ಮಂಗಳವಾರ ಲಿಖಿತ ಆದೇಶ ಹೊರಡಿಸಿದ್ದು, ಕರ್ನಾಟಕ ಬ್ಯಾರಿ ಅಕಾಡೆಮಿಯ ಅಧ್ಯಕ್ಷರ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರಹೀಂ ಉಚ್ಚಿಲ ಅವರ ಅಧ್ಯಕ್ಷ ಪದವಿಯನ್ನು ರದ್ದುಪಡಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಪದವಿ ರದ್ದತಿಗೆ ಯಾವುದೇ ಕಾರಣ ತಿಳಿಸಲಾಗಿಲ್ಲ. 

  • Blogger Comments
  • Facebook Comments

0 comments:

Post a Comment

Item Reviewed: ಸಕಾರಣ ತಿಳಿಸದೆ ರಹೀಂ ಉಚ್ಚಿಲ ಅವರ ಬ್ಯಾರಿ ಅಕಾಡೆಮಿ ಅಧ್ಯಕ್ಷ ಪದವಿ ರದ್ದುಗೊಳಿಸಿದ ಸರಕಾರ Rating: 5 Reviewed By: karavali Times
Scroll to Top