ತುಳು ಅಕಾಡೆಮಿ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ ನಿಧನ : ಅಕಾಡೆಮಿ ಅಧ್ಯಕ್ಷರ ಸಂತಾಪ - Karavali Times ತುಳು ಅಕಾಡೆಮಿ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ ನಿಧನ : ಅಕಾಡೆಮಿ ಅಧ್ಯಕ್ಷರ ಸಂತಾಪ - Karavali Times

728x90

1 June 2022

ತುಳು ಅಕಾಡೆಮಿ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ ನಿಧನ : ಅಕಾಡೆಮಿ ಅಧ್ಯಕ್ಷರ ಸಂತಾಪ

ಬಂಟ್ವಾಳ, ಜೂನ್ 01, 2022 (ಕರಾವಳಿ ಟೈಮ್ಸ್) : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ಉದ್ಯಮಿ ಮಂಗಳೂರು-ಪದವಿನಂಗಡಿ ನಿವಾಸಿ ನಿಟ್ಟೆ ಶಶಿಧರ ಶೆಟ್ಟಿ (65) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. 

ಶಾರದಾ ಕ್ಯಾಟರರ್ಸ್ ಮಾಲಕರಾಗಿದ್ದ ಇವರು ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಬಂಟರ ಮಾತೃ ಸಂಘದ ಮಾಜಿ ಕಾರ್ಯದರ್ಶಿ, ಲಯನ್ಸ್ ಕ್ಲಬ್ ಪದಾಧಿಕಾರಿ, ಕುಡ್ಲ ತುಳು ಕೂಟದ ಸದಸ್ಯ, ಪದವಿನಂಗಡಿ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಸಹಿತ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಪುತ್ರಿ ವಿದೇಶದಿಂದ ಬಂದ ಬಳಿಕ ಜೂನ್ 4 ರಂದು ಮೃತದೇಹದ ಅಂತ್ಯ ಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

  • Blogger Comments
  • Facebook Comments

0 comments:

Post a Comment

Item Reviewed: ತುಳು ಅಕಾಡೆಮಿ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ ನಿಧನ : ಅಕಾಡೆಮಿ ಅಧ್ಯಕ್ಷರ ಸಂತಾಪ Rating: 5 Reviewed By: karavali Times
Scroll to Top