ಗುಡ್ಡೆಅಂಗಡಿ ನಿವಾಸಿ ಅದ್ದಿಯಾಕಗೆ‌ ಪತ್ನಿ ವಿಯೋಗ - Karavali Times ಗುಡ್ಡೆಅಂಗಡಿ ನಿವಾಸಿ ಅದ್ದಿಯಾಕಗೆ‌ ಪತ್ನಿ ವಿಯೋಗ - Karavali Times

728x90

2 July 2022

ಗುಡ್ಡೆಅಂಗಡಿ ನಿವಾಸಿ ಅದ್ದಿಯಾಕಗೆ‌ ಪತ್ನಿ ವಿಯೋಗ

 ಬಂಟ್ವಾಳ, ಜುಲೈ 02, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಬಳಿಯ ನಿವಾಸಿ ಪಿ ಕೆ ಅಬ್ದುಲ್ ಖಾದರ್ ಅದ್ದಿಯಾಕ ಅವರ ಪತ್ನಿ ಪಿ ಕೆ ಮೈಮೂನಾ (87) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಗಳ ಮನೆ ಶಿವಮೊಗ್ಗದಲ್ಲಿ ಶನಿವಾರ (ಜುಲೈ 2) ಮಧ್ಯಾಹ್ನ ನಿಧನರಾಗಿದ್ದಾರೆ. 

 ಮೃತರ ಜನಾಝವು ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಗುಡ್ಡೆಅಂಗಡಿಯ ಮನೆಗೆ ತರಲಾಗುತ್ತಿದ್ದು, ಮೃತರ ವಿದೇಶದಲ್ಲಿರುವ ಇಬ್ಬರು ಪುತ್ರಿಯರು ಜನಾಝ ಸಂದರ್ಶನಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಭಾನುವಾರ (ಜುಲೈ 3) ಮಧ್ಯಾಹ್ನದ ವೇಳೆಗೆ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಸಲಾಗುವುದು. 

 ಮೃತರು ಪತಿ, ನಾಲ್ಕು ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 

 ಮೈಮೂನಾ ಅವರ ನಿಧನಕ್ಕೆ ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಇರ್ಶಾದ್ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಗುಡ್ಡೆಅಂಗಡಿ ನಿವಾಸಿ ಅದ್ದಿಯಾಕಗೆ‌ ಪತ್ನಿ ವಿಯೋಗ Rating: 5 Reviewed By: karavali Times
Scroll to Top