ಕಡಬ : ಸ್ವಾತಂತ್ರ್ಯೋತ್ಸವದ ಧ್ವಜವಂದನೆ ಸ್ವೀಕರಿಸಲು ಬಂದಿದ್ದ ವೇಳೆ ಕುಸಿದು ಬಿದ್ದು ಮೃತ್ಯು - Karavali Times ಕಡಬ : ಸ್ವಾತಂತ್ರ್ಯೋತ್ಸವದ ಧ್ವಜವಂದನೆ ಸ್ವೀಕರಿಸಲು ಬಂದಿದ್ದ ವೇಳೆ ಕುಸಿದು ಬಿದ್ದು ಮೃತ್ಯು - Karavali Times

728x90

15 August 2022

ಕಡಬ : ಸ್ವಾತಂತ್ರ್ಯೋತ್ಸವದ ಧ್ವಜವಂದನೆ ಸ್ವೀಕರಿಸಲು ಬಂದಿದ್ದ ವೇಳೆ ಕುಸಿದು ಬಿದ್ದು ಮೃತ್ಯು

ಕಡಬ, ಆಗಸ್ಟ್ 15, 2022 (ಕರಾವಳಿ ಟೈಮ್ಸ್) : ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಸೋಮವಾರ ಬೆಳಿಗ್ಗೆ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕಾರಕ್ಕಾಗಿ ಆಹ್ವಾನಿಸಲಾಗಿದ್ದ ಕುಟ್ಟುಪ್ಪಾಡಿ ನಿವಾಸಿ ಗಂಗಾಧರ ಗೌಡ ಎ (54) ಅವರು ಧ್ವಜ ವಂದನೆ ಸ್ವೀಕಾರಕ್ಕೆ ಮುನ್ನ ಸ್ಥಳದಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. 

ಈ ಬಗ್ಗೆ ಕುಟ್ರುಪ್ಪಾಡಿ ಗ್ರಾ ಪಂ ಸದಸ್ಯ ರಮೇಶ್ ಪಿ ಅವರು ಕಡಬ ಠಾಣೆಗೆ ಫಿರ್ಯಾದಿ ಸಲ್ಲಿಸಿದ್ದು, ಸೋಮವಾರ ಗ್ರಾಮ ಪಂಚಾಯತ್ ವತಿಯಿಂದ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮಕ್ಕೆ ಗಂಗಾಧರಗೌಡ ಅವರನ್ನು ದ್ವಜ ವಂದನೆಗಾಗಿ ಆಹ್ವಾನಿಸಲಾಗಿತ್ತು. ಬೆಳಿಗ್ಗೆ 9.30 ರ ವೇಳೆಗೆ ದ್ವಜಾರೋಹಣ ಕಾರ್ಯಕ್ರಮದ ಸ್ಥಳದಲ್ಲಿ  ಗಂಗಾಧರ ಗೌಡ ಅವರು ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಉಪಚರಿಸಿ ಚಿಕಿತ್ಸೆಗಾಗಿ ಕಡಬ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗಂಗಾಧರ ಗೌಡ ಅವರು ಹೃದಯಾಘಾತ ಅಥವಾ ಇನ್ಯಾವುದೋ ಖಾಯಿಲೆಯಿಂದ ಕುಸಿದು ಬಿದ್ದು, ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. 

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 25/2022 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡಬ : ಸ್ವಾತಂತ್ರ್ಯೋತ್ಸವದ ಧ್ವಜವಂದನೆ ಸ್ವೀಕರಿಸಲು ಬಂದಿದ್ದ ವೇಳೆ ಕುಸಿದು ಬಿದ್ದು ಮೃತ್ಯು Rating: 5 Reviewed By: karavali Times
Scroll to Top