ಕಾರಾಜೆ ಅಕ್ರಮ ವಧಾಗೃಹಕ್ಕೆ ಪೊಲೀಸ್ ದಾಳಿ : ಆರೋಪಿಗಳು ಪರಾರಿ - Karavali Times ಕಾರಾಜೆ ಅಕ್ರಮ ವಧಾಗೃಹಕ್ಕೆ ಪೊಲೀಸ್ ದಾಳಿ : ಆರೋಪಿಗಳು ಪರಾರಿ - Karavali Times

728x90

8 April 2020

ಕಾರಾಜೆ ಅಕ್ರಮ ವಧಾಗೃಹಕ್ಕೆ ಪೊಲೀಸ್ ದಾಳಿ : ಆರೋಪಿಗಳು ಪರಾರಿ




ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮೂಡ ಗ್ರಾಮದ ಕಾರಾಜೆ ಎಂಬಲ್ಲಿನ ಮನೆಯಲ್ಲಿ ನಡೆಸುತ್ತಿದ್ದ ಅಕ್ರಮ ಗೋವಧಾ ಕೇಂದ್ರಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಬುಧವಾರ ದಾಳಿ ನಡೆಸಿ ಮಾಂಸ ಸಹಿತ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಲ್ಲಿನ ಮನೆಯಲ್ಲಿ ಕಳೆದ ಹಲವು ಸಮಯಗಳಿಂದ ಅಕ್ರಮ ಜಾನುವಾರು ವಧೆ ನಡೆಸಿ ಮಾಂಸ ಮಾರಾಟ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಬುಧವಾರ ದೊರೆತ ಖಚಿತ ಮಾಹಿತಿಯಂತೆ ಬಂಟ್ವಾಳ ನಗರ ಪಿಎಸ್ಸೈ ಅವಿನಾಶ್ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.

ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ. ಸ್ಥಳದಲ್ಲಿದ್ದ ಸುಮಾರು 40 ಕೆ ಜಿ ಮಾಂಸ, 4 ಬೈಕ್, 1 ಕಾರು ಹಾಗೂ ಅಟೋ ರಿಕ್ಷಾವನ್ನು ಪೆÇೀಲಿಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು ಮನೆಯಲ್ಲೇ ಜಾನುವಾರು ಕಡಿದು ಮಾಂಸ ಮಾಡಿ ದ್ವಿಚಕ್ರ ಹಾಗೂ ಅಟೋ ರಿಕ್ಷಾಗಳ ಮೂಲಕ ಮನೆಮನೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಕಾರಾಜೆ ಅಕ್ರಮ ವಧಾಗೃಹಕ್ಕೆ ಪೊಲೀಸ್ ದಾಳಿ : ಆರೋಪಿಗಳು ಪರಾರಿ Rating: 5 Reviewed By: karavali Times
Scroll to Top