ಬಂಟ್ವಾಳ, ಸೆಪ್ಟೆಂಬರ್ 21, 2023 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯಲ್ಲಿ ಸಹೋದರಿಯರೇ ಮಲಗಿದ್ದ ಕೋಣೆಗೆ ರಾತ್ರಿ ವೇಳೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕಿಟಕಿಯಿಂದ ಇಣುಕು ನೋಡಿ ನೆರೆಮನೆ ನಿವಾಸಿ ವಿಶ್ವನಾಥ ಎಂಬಾತನ ವಿರುದ್ದ ಠಾಣೆಯಲ್ಲಿ ಸಂತ್ರಸ್ತೆ ಯುವತಿ ದೂರು ದಾಖಲಿಸಿದ್ದಾಳೆ.
ಬುಧವಾರ ಸಂತ್ರಸ್ಥ ಯುವತಿಯು ತನ್ನ ಮನೆಯಲ್ಲಿ ಊಟ ಮುಗಿಸಿ, ಮನೆಯ ಕೋಣೆಯಲ್ಲಿ ತನ್ನ ತಂಗಿಯರೊಂದಿಗೆ ಮಲಗಿದ್ದಾಗ, ಕೋಣೆಯ ಕಿಟಕಿಯಿಂದ ಆರೋಪಿ ವಿಶ್ವನಾಥ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಕಲಂ 354(ಸಿ) ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
0 comments:
Post a Comment