ಅಡಿಕೆ ಕಳವು ಪ್ರಕರಣ ಭೇದಿಸಿ ಅಡಿಕೆ ಸಹಿತ ಆರೋಪಿ ಬಂಧಿಸಿದ ಬೆಳ್ಳಾರೆ ಪೊಲೀಸರು - Karavali Times ಅಡಿಕೆ ಕಳವು ಪ್ರಕರಣ ಭೇದಿಸಿ ಅಡಿಕೆ ಸಹಿತ ಆರೋಪಿ ಬಂಧಿಸಿದ ಬೆಳ್ಳಾರೆ ಪೊಲೀಸರು - Karavali Times

728x90

23 March 2024

ಅಡಿಕೆ ಕಳವು ಪ್ರಕರಣ ಭೇದಿಸಿ ಅಡಿಕೆ ಸಹಿತ ಆರೋಪಿ ಬಂಧಿಸಿದ ಬೆಳ್ಳಾರೆ ಪೊಲೀಸರು

ಸುಳ್ಯ, ಮಾರ್ಚ್ 23, 2024 (ಕರಾವಳಿ ಟೈಮ್ಸ್) : ಅಡಿಕೆ ಕಳ್ಳತನ ಪ್ರಕರಣ ಬೇಧಿಸಿದ ಬೆಳ್ಳಾರೆ ಪೊಲೀಸರು ಸಾವಿರಾರು ರೂಪಾಯಿ ಮೌಲ್ಯದ ಅಡಿಕೆ, ಅಟೋ ರಿಕ್ಷಾ ಸಹಿತ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. 

ಮಾರ್ಚ್ 14 ರಂದು ಸಂಜೆಯಿಂದ ಮಾ 15ರ ಬೆಳಗ್ಗಿನ ಅವಧಿಯಲ್ಲಿ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕುಳ್ಳಂಪ್ಪಾಡಿ ಹಿರಿಯಣ್ಣ ಎಂಬವರ ಕೊಟ್ಟಿಗೆಯಲ್ಲಿ ಸುಲಿದು ದಾಸ್ತಾನಿರಿಸಿದ್ದ 5 ಗೋಣಿ ಚೀಲ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ  ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಲ್ಲಿ ತನಿಖೆ ಕೈಗೊಂಡು ಕಾರ್ಯಾಚರಣೆ ನಡೆಸಿದ ಬೆಳ್ಳಾರೆ ಪೊಲೀಸರು ಆರೋಪಿ ಮಂಡೆಕೋಲು ಗ್ರಾಮದ ನಿವಾಸಿ ಸುಪೀತ್ ಕೆ (20) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 83 ಸಾವಿರ ರೂಪಾಯಿ ಮೌಲ್ಯದ 209 ಕೆಜಿ ಸುಲಿದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ 1 ಲಕ್ಷ ರೂಪಾಯಿ ಮೌಲ್ಯದ ಆಟೋ ರಿಕ್ಷಾವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. 

ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಬೆಳ್ಳಾರೆ ಪೆÇಲೀಸ್ ಠಾಣಾ ಪಿಎಸ್ಸೈ ಬಿ.ಪಿ ಸಂತೋಷ್ ಹಾಗೂ ಸಿಬ್ಬಂದಿಗಳಾದ ನವೀನ ಕೆ, ಕೃಷ್ಣಪ್ಪ, ದೇವರಾಜ್, ಸಂತೋಷ್ ಕೆ ಜಿ, ಸುಭಾಸ್ ಕಿತ್ತೂರ, ಪುರಂದರ ಅವರುಗಳ ತನಿಖಾ ತಂಡ ಕಾರ್ಯಾಚರಣೆ ನಡೆಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಡಿಕೆ ಕಳವು ಪ್ರಕರಣ ಭೇದಿಸಿ ಅಡಿಕೆ ಸಹಿತ ಆರೋಪಿ ಬಂಧಿಸಿದ ಬೆಳ್ಳಾರೆ ಪೊಲೀಸರು Rating: 5 Reviewed By: karavali Times
Scroll to Top