ಆಪರೇಶನ್ ಸಿಂಧೂರ ಮೂಲಕ ನರಮೇಧಕ್ಕೆ ತಕ್ಕ ಉತ್ತರ : ಅಮಿತ್ ಶಾ ಬಣ್ಣನೆ - Karavali Times ಆಪರೇಶನ್ ಸಿಂಧೂರ ಮೂಲಕ ನರಮೇಧಕ್ಕೆ ತಕ್ಕ ಉತ್ತರ : ಅಮಿತ್ ಶಾ ಬಣ್ಣನೆ - Karavali Times

728x90

7 May 2025

ಆಪರೇಶನ್ ಸಿಂಧೂರ ಮೂಲಕ ನರಮೇಧಕ್ಕೆ ತಕ್ಕ ಉತ್ತರ : ಅಮಿತ್ ಶಾ ಬಣ್ಣನೆ

ನವದೆಹಲಿ, ಮೇ 07, 2025 (ಕರಾವಳಿ ಟೈಮ್ಸ್) : ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಯಿದೆ ಎಂದು ಸೇನಾಪಡೆಗಳ ಕಾರ್ಯಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ನಮ್ಮ ಮುಗ್ಧ ಸಹೋದರರ ಕ್ರೂರ ಹತ್ಯೆಗೆ ಆಪರೇಷನ್ ಸಿಂಧೂರದ ಮೂಲಕ ಭಾರತ ಉತ್ತರ ನೀಡಿದೆ. ಭಾರತ ಮತ್ತು ಅಲ್ಲಿನ ಜನರ ಮೇಲಿನ ಯಾವುದೇ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಸರ್ಕಾರವು ನಿರ್ಧರಿಸಿದೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಲು ಭಾರತ ಸದಾ ಸಿದ್ಧ ಎಂದವರು ಪೆÇೀಸ್ಟ್ ಮಾಡಿದ್ದಾರೆ. 

ಪಹಲ್ಗಾಮ್ ಉಗ್ರರ ದಾಳಿಗೆ ಪತ್ರೀಕಾರವಾಗಿ ಮಂಗಳವಾರ ತಡರಾತ್ರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಸೇನಾಯು ಪಾಕಿಸ್ತಾನದ 9 ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • Blogger Comments
  • Facebook Comments

0 comments:

Post a Comment

Item Reviewed: ಆಪರೇಶನ್ ಸಿಂಧೂರ ಮೂಲಕ ನರಮೇಧಕ್ಕೆ ತಕ್ಕ ಉತ್ತರ : ಅಮಿತ್ ಶಾ ಬಣ್ಣನೆ Rating: 5 Reviewed By: karavali Times
Scroll to Top