ಬಂಟ್ವಾಳ, ಮೇ 07, 2025 (ಕರಾವಳಿ ಟೈಮ್ಸ್) : ಪೈಟಿಂಗ್ ಕಾರ್ಮಿಕ ಯುವಕನೋರ್ವ ಮನೆಯ ಸೀಟೌಟಿನ ಕಬ್ಬಿಣದ ಅಡ್ಡಕ್ಕೆ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ ಕಸಬಾ ಗ್ರಾಮದ ನೇರಂಬೋಳು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮೃತ ಪೈಂಟಿಂಗ್ ಕಾರ್ಮಿಕ ಯುವಕನನ್ನು ಇಲ್ಲಿನ ನಿವಾಸಿ ದಿವಂಗತ ದಯಾನಂದ ಪೂಜಾರಿ ಅವರ ಪುತ್ರ ದೀಕ್ಷಿತ್ ಎಂದು ಹೆಸರಿಸಲಾಗಿದೆ. ಅವಿವಾಹಿತನಾಗಿರುವ ದೀಕ್ಷಿತ್ ಸ್ಥಳೀಯವಾಗಿ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಮಂಗಳವಾರ ಅಪರಾಹ್ಮ 2.30 ರ ವೇಳೆಗೆ ದೀಕ್ಷಿತ್ ಮನೆಯ ಸೀಟೌಟಿನ ಕಬ್ಬಿಣದ ಅಡ್ಡಕ್ಕೆ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತಹ್ಮತ್ಯೆ ಮಾಡಿಕೊಂಡಿದ್ದಾನೆ. ಯಾವ ಕಾರಣಕ್ಕೆ ಈತ ಕೃತ್ಯ ಎಸಗಿದ್ದಾನೆ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಮೃತನ ಸಹೋದರ ಯಕ್ಷಿತ್ ನೀಡಿರುವ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment