ಬೋಳಂಗಡಿ : ಹಿಟ್ ಆಂಡ್ ರನ್ ನಡೆಸಿದ ಬಸ್ಸು, ಕೆ.ಎನ್.ಆರ್. ಕಂಪೆನಿಯ ಕಾರ್ಮಿಕ ಮೃತ್ಯು - Karavali Times ಬೋಳಂಗಡಿ : ಹಿಟ್ ಆಂಡ್ ರನ್ ನಡೆಸಿದ ಬಸ್ಸು, ಕೆ.ಎನ್.ಆರ್. ಕಂಪೆನಿಯ ಕಾರ್ಮಿಕ ಮೃತ್ಯು - Karavali Times

728x90

22 May 2025

ಬೋಳಂಗಡಿ : ಹಿಟ್ ಆಂಡ್ ರನ್ ನಡೆಸಿದ ಬಸ್ಸು, ಕೆ.ಎನ್.ಆರ್. ಕಂಪೆನಿಯ ಕಾರ್ಮಿಕ ಮೃತ್ಯು

 ಬಂಟ್ವಾಳ, ಮೇ 22, 2025 (ಕರಾವಳಿ ಟೈಮ್ಸ್) : ಬಸ್ಸು ಡಿಕ್ಕಿ ಹೊಡೆದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಕೆ ಎನ್ ಆರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಪಾಣೆಮಂಗಳೂರು ಸಮೀಪದ ಬೋಳಂಗಡಿ ಮಸೀದಿ ಮುಂಭಾಗ ಮೇ 19 ರಂದು ಸಂಭವಿಸಿರುವ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೃತ ಕಾರ್ಮಿಕನನ್ನು ತೆಂಲಗಾಣ ರಾಜ್ಯದ ಮೆಹಬೂಬ್ ನಗರ ನಿವಾಸಿ ಸುರಾರಾಮ್ ಬುಗ್ಗಪ್ಪ (51) ಎಂದು ಹೆಸರಿಸಲಾಗಿದೆ. ಇವರು ಬಿ ಸಿ ರೋಡು-ಅಡ್ಡಹೊಳೆ ರಸ್ತೆ ಕಾಮಗಾರಿ ನಡೆಸುತ್ತಿರುವ ಕೆ ಎನ್ ಆರ್ ಕಂಪೆನಿಯ ಸಬ್ ಕಂಟ್ರಾಕ್ಟರ್ ಮೇಸ್ತ್ರಿಯ ಅಧೀನದಲ್ಲಿ ಲೇಬರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಸೋಮವಾರ ಮುಂಜಾನೆ ಬೋಳಂಗಡಿ ಮಸೀದಿ ಮುಂಭಾಗದ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೆಂಗಳೂರಿನಿಂದ ಮಂಗಳೂರು ಕಡೆ ಸಂಚರಿಸುತ್ತಿದ್ದ ಬಸ್ಸು ಹಿಂದಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತ ನಡೆಸಿದ ಬಸ್ಸು ಚಾಲಕ ಬಸ್ಸನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ. 

ಅಪಘಾತದಿಂದ ಗಂಭೀರ ಗಾಯಗೊಂಡ ಬುಗ್ಗಪ್ಪ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೋಳಂಗಡಿ : ಹಿಟ್ ಆಂಡ್ ರನ್ ನಡೆಸಿದ ಬಸ್ಸು, ಕೆ.ಎನ್.ಆರ್. ಕಂಪೆನಿಯ ಕಾರ್ಮಿಕ ಮೃತ್ಯು Rating: 5 Reviewed By: karavali Times
Scroll to Top