ಕಬಕ ಸಮೀಪ ಸರಕಾರಿ ಬಸ್ಸು-ಬೈಕ್ ನಡುವೆ ಭೀಕರ ಅಪಘಾತದಲ್ಲಿ ನರಿಕೊಂಬು ಗ್ರಾ.ಪಂ. ಸದಸ್ಯ ಹಾಗೂ ಪುತ್ರ ದಾರುಣ ಸಾವು - Karavali Times ಕಬಕ ಸಮೀಪ ಸರಕಾರಿ ಬಸ್ಸು-ಬೈಕ್ ನಡುವೆ ಭೀಕರ ಅಪಘಾತದಲ್ಲಿ ನರಿಕೊಂಬು ಗ್ರಾ.ಪಂ. ಸದಸ್ಯ ಹಾಗೂ ಪುತ್ರ ದಾರುಣ ಸಾವು - Karavali Times

728x90

11 May 2025

ಕಬಕ ಸಮೀಪ ಸರಕಾರಿ ಬಸ್ಸು-ಬೈಕ್ ನಡುವೆ ಭೀಕರ ಅಪಘಾತದಲ್ಲಿ ನರಿಕೊಂಬು ಗ್ರಾ.ಪಂ. ಸದಸ್ಯ ಹಾಗೂ ಪುತ್ರ ದಾರುಣ ಸಾವು

ಬಂಟ್ವಾಳ, ಮೇ 11, 2025 (ಕರಾವಳಿ ಟೈಮ್ಸ್) : ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದು ಬೈಕ್ ಸವಾರರಾದ ತಂದೆ-ಮಗ ದಾರುಣವಾಗಿ ಮೃತಪಟ್ಟ ಘಟನೆ ಕಬಕ ಸಮೀಪದ ಕುವೆತ್ತಿಲ ಎಂಬಲ್ಲಿ ಭಾನುವಾರ ಸಂಭವಿಸಿದೆ. 

ಮೃತರನ್ನು ನರಿಕೊಂಬು ಗ್ರಾಮದ ಬೋರುಗುಡ್ಡೆ ನಿವಾಸಿ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ, ಬಂಟ್ವಾಳ ಸಮಾಜಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಅರುಣ್ ಕುಲಾಲ್ ಬೋರುಗುಡ್ಡೆ (45) ಹಾಗೂ ಸಹಸವಾರನಾಗಿದ್ದ ಅವರ ಪುತ್ರ ಧ್ಯಾನ್ (15) ಎಂದು ಹೆಸರಿಸಲಾಗಿದೆ. 

ಸುಳ್ಯದಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತಂದೆ-ಮಗ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ ಕಬಕ ಸಮೀಪದ ಕುವೆತ್ತಿಲ ತಿರುವಿನಲ್ಲಿ ಕೆ ವಿರುದ್ದ ದಿಕ್ಕಿನಲ್ಲಿ ಬಂದ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ಅರುಣ್ ಕುಲಾಲ್ ಅವರು ಸ್ಥಳದಲ್ಲಿಯೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಪುತ್ರ ಧ್ಯಾನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬಸ್ಸು ಚಾಲಕನ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದ್ದು, ಸ್ಥಳಕ್ಕಾಗಮಿಸಿದ ಪುತ್ತೂರು ಟ್ರಾಫಿಕ್ ಪೆÇಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಬಕ ಸಮೀಪ ಸರಕಾರಿ ಬಸ್ಸು-ಬೈಕ್ ನಡುವೆ ಭೀಕರ ಅಪಘಾತದಲ್ಲಿ ನರಿಕೊಂಬು ಗ್ರಾ.ಪಂ. ಸದಸ್ಯ ಹಾಗೂ ಪುತ್ರ ದಾರುಣ ಸಾವು Rating: 5 Reviewed By: karavali Times