ಕರಾವಳಿಯಲ್ಲಿ ಡಬ್ಬಲ್ ಮರ್ಡರ್ ಬಳಿಕ ಪೊಲೀಸರಿಗೇ ಸವಾಲಾಗುತ್ತಿರುವ ಸೋಶಿಯಲ್ ಮೀಡಿಯಾ ಮೆಸೇಜ್ ಗಳು : ಹಲವು ಪ್ರಕರಣ ದಾಖಲಿಸಿ ಕಿಡಿಗೇಡಿಗಳ ಬೆನ್ನು ಬಿದ್ದಿರುವ ಖಾಕಿ ಪಡೆ - Karavali Times ಕರಾವಳಿಯಲ್ಲಿ ಡಬ್ಬಲ್ ಮರ್ಡರ್ ಬಳಿಕ ಪೊಲೀಸರಿಗೇ ಸವಾಲಾಗುತ್ತಿರುವ ಸೋಶಿಯಲ್ ಮೀಡಿಯಾ ಮೆಸೇಜ್ ಗಳು : ಹಲವು ಪ್ರಕರಣ ದಾಖಲಿಸಿ ಕಿಡಿಗೇಡಿಗಳ ಬೆನ್ನು ಬಿದ್ದಿರುವ ಖಾಕಿ ಪಡೆ - Karavali Times

728x90

4 May 2025

ಕರಾವಳಿಯಲ್ಲಿ ಡಬ್ಬಲ್ ಮರ್ಡರ್ ಬಳಿಕ ಪೊಲೀಸರಿಗೇ ಸವಾಲಾಗುತ್ತಿರುವ ಸೋಶಿಯಲ್ ಮೀಡಿಯಾ ಮೆಸೇಜ್ ಗಳು : ಹಲವು ಪ್ರಕರಣ ದಾಖಲಿಸಿ ಕಿಡಿಗೇಡಿಗಳ ಬೆನ್ನು ಬಿದ್ದಿರುವ ಖಾಕಿ ಪಡೆ

ಮಂಗಳೂರು, ಮೇ 04, 2025 (ಕರಾವಳಿ ಟೈಮ್ಸ್) : ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಸಾಮಾಜಿಕ ಜಾಲ ತಾಣಗಳ ವಿವಿಧ ಪ್ಲ್ಯಾಟ್ ಫಾರಂಗಳಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ಹಾಗೂ ಸಾಮಾಜಿಕ ಶಾಂತಿಗೆ ಧಕ್ಕೆ ಬರುವ ರೀತಿಯ ಹಲವು ಪೋಸ್ಟ್‍ಗಳು ಹರಿದಾಡುತ್ತಿದ್ದು, ಇದೀಗ ಇಂತಹ ಸೋಶಿಯಲ್ ನೆಟ್ ವರ್ಕ್ ಪೋಸ್ಟ್ ಗಳ ಹಿಂದೆ ಬಿದ್ದಿರುವ ಪೊಲೀಸರು ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 

ಈ ಸಂಬಂಧ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರದವರೆಗೆ ಸುಮಾರು 12 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಲ್ಕಿ, ಉರ್ವ, ಬರ್ಕೆ, ಮೂಡಬಿದ್ರಿ ಮತ್ತು ಕಾವೂರು ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಇನ್‍ಸ್ಟಾಗ್ರಾಮ್, ಫೇಸ್‍ಬುಕ್, ವಾಟ್ಸಪ್ ಮೊದಲಾದ ಸೋಶಿಯಲ್ ನೆಟ್ ವರ್ಕ್ ಪ್ಲಾಟ್ ಫಾರಂಗಳಲ್ಲಿ ಕಿಡಿಗೇಡಿಗಳು ವ್ಯಾಪಕವಾಗಿ ಸಾಮಾಜಿಕ ಶಾಂತಿಗೆ ಧಕ್ಕೆ ಬರುವ ರೀತಿಯ ಫೆÇೀಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂತಹ ಸೋಶಿಯಲ್ ನೆಟ್ ವರ್ಕ್ ವಾರ್ ಗಳು ಕರಾವಳಿ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುವುದರ ಜೊತೆಗೆ ಪೊಲೀಸರಿಗೂ ತಲೆ ನೋವು ಹೆಚ್ಚಿಸಿದೆ. 

ಕೆಲವು ಫೆÇೀಸ್ಟ್ ಗಳಲ್ಲಿ ಸುಹಾಸ್ ಶೆಟ್ಟಿಯ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ, ನಮ್ಮ ಶಕ್ತಿಯನ್ನು ತೋರಿಸದಿದ್ದರೆ ನಾವು ಬದುಕುವುದಿಲ್ಲ, ರಕ್ತಕ್ಕೆ ರಕ್ತವೇ ಉತ್ತರ ಎಂದು ಬರೆಯಲಾದ್ದರೆ, ಇನ್ನೊಂದು ಫೆÇೀಸ್ಟ್ ನಲ್ಲಿ ‘ಫಿನಿಶ್ಡ್’ ಎಂಬ ಪದದೊಂದಿಗೆ ಸುಹಾಸ್ ಶೆಟ್ಟಿ ಫೆÇೀಟೋ ಕೂಡಾ ಹಂಚಿಕೊಳ್ಳಲಾಗಿದೆ. ಶೀಘ್ರದಲ್ಲೇ ಮುಂದಿನ ವಿಕೆಟ್ ಬೀಳಲಿದೆ ಎಂದು ಕೂಡಾ ಫೆÇೀಸ್ಟ್ ಮಾಡಲಾಗಿದೆ. ಕುಡ್ಲ ಫ್ರೆಂಡ್ಸ್ ಹಾಗೂ ಝರ್‍ಡೆಕ್ಸ್ ಎಂಬ ಪೇಜಿನಲ್ಲಿ ‘ನಾಳೆ ಮುಸ್ಲಿಂ ಒಂದು ವಿಕೆಟ್ ಹೋಗುತ್ತೆ’ ಎಂಬ ಪೋಸ್ಟ್ ಮಾಡಲಾಗಿತ್ತು. ಇನ್ಸ್ಟಾಗ್ರಾಂ ಖಾತೆಯ ಬ್ಯಾರಿ ನವಾಬ್ ರೋಯಲ್ ನವಾಬ್ ಎಂಬ ಹೆಸರಿನ ಪೇಜಿನಲ್ಲಿ ‘ಶತ್ರು ಸಂಹಾರ ಶುರವಾಗಿದೆ, ಪ್ರತಿರೋಧ ಅಪರಾಧವಲ್ಲ’ ಎಂದು ಪೋಸ್ಟ್ ಮಾಡಲಾಗಿತ್ತು. ಪುತ್ತಿಲ ಪರಿವಾರ ಎಂಬ ವಾಟ್ಸಪ್ ಗ್ರೂಪಿನಲ್ಲಿ “ನಮ್ಮ ಬಲವನ್ನು ಈಗ ತೋರಿಸದೇ ಇದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ, ಹಿಂದು ಸಾಗರದ ಬಿಂದು ಬಿಂದುಗಳೆ ಒಟ್ಟಾಗೋಣ”  ಮತ್ತು ಅದಕ್ಕೆ “ಬಲಿದಾನ ವ್ಯರ್ಥವಾಗದಿರಲಿ” ಎಂದು ಟ್ಯಾಗ್ ಲೈನ್ ಮಾಡಿರುವುದು ಕಂಡು ಬಂದಿದೆ. ಡಿಜೆ ಭಾರತ್-2008 ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ “ಸುಹಾಸ್ ಅಣ್ಣನ ಕೊಂದವರು ಹಾಗೂ ಕೊಂದವರಿಗೆ ಸಹಾಯ ಮಾಡಿದವರೆಲ್ಲರ ರಕ್ತ ಹರಿಯಬೇಕು. ಆಗ ಮಾತ್ರ ಸುಹಾಸ್ ಅಣ್ಣನ ಆತ್ಮಕ್ಕೆ ಶಾಂತಿ ಸಿಗುತ್ತೆ ನೆನಪಿಟ್ಟುಕೊಳ್ಳಿ” ಎಂಬುದಾಗಿ  ಪೆÇೀಸ್ಟ್ ಮಾಡಲಾಗಿತ್ತು. ಉಳ್ಳಾಲ್ತೊ ಮಕ್ಕ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫಾಝಿಲ್ ಕೊಲೆ ಪ್ರಕರಣದ ಆರೋಪಿಗಳ ಭಾವ ಚಿತ್ರದ ಕೆಳಗಡೆ “ಪ್ರತಿರೋಧ ಅಪರಾಧವಲ್ಲ” ಎಂಬ ತಲೆಬರಹದಡಿಯಲ್ಲಿ “ಮುಸ್ಲಿಮರು ನಪುಂಸಕರಲ್ಲ ನೆನಪಿರಲಿ ತಾನು ಯಾವ ಕಾರಣಕ್ಕೆ ಕೊಲೆಯಾದೆ ಅನ್ನೋ ಅರಿವಿಲ್ಲದೇ ಖಬರಸ್ಥಾನದಲ್ಲಿ ಮಲಗಿರೋ ಅಮಾಯಕ ಫಾಝಿಲ್ ಕೊಲೆ ಮಾಡಿದ ಇವನ ಸಾವನ್ನು ದುಃಖ ಪಡುವಷ್ಟು ಮೂರ್ಖ ನಾನಲ್ಲ” ಎಂಬ ಬರಹವನ್ನು ಪೆÇೀಸ್ಟ್ ಮಾಡಲಾಗಿತ್ತು. ಹಿಂದೂ ಧರ್ಮ 006 ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ “ನಮಗೆ ಯಾವುದೇ ರೀತಿಯ ಉತ್ತರಗಳು ಬೇಡ, ರಕ್ತಕ್ಕೆ, ರಕ್ತವೇ ಉತ್ತರವಾಗಬೇಕು ಜೀವಕ್ಕೆ, ಜೀವನೇ ಬೇಕು” ಸ್ಟೇಟಸ್ ಹಾಕಲಾಗಿತ್ತು.

ಇಂತಹ ಹಲವಾರು ಉದ್ದೇಕಕಾರಿ ಹಾಗೂ ಸಮಾಜ ವಿರೋಧಿ ಪೋಸ್ಟ್‍ಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಕಿಡಿಗೇಡಿಗಳು ಹರಿಯಬಿಟ್ಟು ಪೊಲೀಸರಿಗೆ ಹಾಗೂ ಸಾಮಾಜಿಕ ಶಾಂತಿಗೆ ಸವಾಲಾಗಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲ ತಾಣಗಳ ಎಲ್ಲ ಪ್ಲಾಟ್ ಫಾರಂಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟು ಗರಿಷ್ಠ ಪ್ರಮಾಣದಲ್ಲಿ ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯದಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕರಾವಳಿಯಲ್ಲಿ ಡಬ್ಬಲ್ ಮರ್ಡರ್ ಬಳಿಕ ಪೊಲೀಸರಿಗೇ ಸವಾಲಾಗುತ್ತಿರುವ ಸೋಶಿಯಲ್ ಮೀಡಿಯಾ ಮೆಸೇಜ್ ಗಳು : ಹಲವು ಪ್ರಕರಣ ದಾಖಲಿಸಿ ಕಿಡಿಗೇಡಿಗಳ ಬೆನ್ನು ಬಿದ್ದಿರುವ ಖಾಕಿ ಪಡೆ Rating: 5 Reviewed By: karavali Times
Scroll to Top