ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿ ನಂದರಬೆಟ್ಟು ಆಯ್ಕೆ - Karavali Times ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿ ನಂದರಬೆಟ್ಟು ಆಯ್ಕೆ - Karavali Times

728x90

15 June 2025

ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿ ನಂದರಬೆಟ್ಟು ಆಯ್ಕೆ

 ಬಂಟ್ವಾಳ, ಜೂನ್ 15, 2025 (ಕರಾವಳಿ ಟೈಮ್ಸ್) : ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿ ನಂದರಬೆಟ್ಟು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. 

ಅಲೆತ್ತೂರು ಮಂಗಳಾ ಭವನದಲ್ಲಿ ನೇಮಿರಾಜ ಶೆಟ್ಟಿ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಂಘದ 45ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಮೋನಪ್ಪ ಪೂಜಾರಿ ಅಲೆತ್ತೂರು, ಅಶ್ವಥ್ ಶೆಟ್ಟಿ ನಂದರಬೆಟ್ಟು ಭಾಗವಹಿಸಿದ್ದರು.  

ಉಪಾದ್ಯಕ್ಷರಾಗಿ ನಾಗೇಶ್ ಕುಲಾಲ್, ಜೊತೆ ಕಾರ್ಯದರ್ಶಿಯಾಗಿ ಕೀರ್ತಿರಾಜ್ ಅಂಚನ್, ಸಂಘಟನಾ ಕಾರ್ಯದರ್ಶಿಯಾಗಿ ತಾರಾನಾಥ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ್ ಪೂಜಾರಿ ಅವರು ಆಯ್ಕೆಯಾದರು.  ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಭಾಸ್ಕರ್ ಕುಲಾಲ್, ದಿನೇಶ್ ಸುವರ್ಣ, ನಿತಿನ್ ಪೂಜಾರಿ, ವಿಶ್ವನಾಥ್ ಪೈ, ವಾಸುದೇವ್ ಅಲೆತ್ತೂರು, ವಿಜಯ್ ಸುವರ್ಣ, ಯಕ್ಷಿತ್, ಪ್ರಜ್ವಲ್, ಸೃಜನ್ ಅವರುಗಳು ನೇಮಕಗೊಂಡರು. 

  • Blogger Comments
  • Facebook Comments

0 comments:

Post a Comment

Item Reviewed: ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿ ನಂದರಬೆಟ್ಟು ಆಯ್ಕೆ Rating: 5 Reviewed By: karavali Times
Scroll to Top