ಫೇಸ್ ಬುಕ್ ಪೇಜಿನಲ್ಲಿ ಜೈನ ಸ್ವಾಮೀಜಿ ಹಾಗೂ ಪ್ರಧಾನಿ ವಿರುದ್ದ ಆಕ್ಷೇಪಾರ್ಹ ಕಮೆಂಟ್ : ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಫೇಸ್ ಬುಕ್ ಪೇಜಿನಲ್ಲಿ ಜೈನ ಸ್ವಾಮೀಜಿ ಹಾಗೂ ಪ್ರಧಾನಿ ವಿರುದ್ದ ಆಕ್ಷೇಪಾರ್ಹ ಕಮೆಂಟ್ : ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

29 June 2025

ಫೇಸ್ ಬುಕ್ ಪೇಜಿನಲ್ಲಿ ಜೈನ ಸ್ವಾಮೀಜಿ ಹಾಗೂ ಪ್ರಧಾನಿ ವಿರುದ್ದ ಆಕ್ಷೇಪಾರ್ಹ ಕಮೆಂಟ್ : ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲು

 ಪುತ್ತೂರು, ಜೂನ್ 29, 2025 (ಕರಾವಳಿ ಟೈಮ್ಸ್) : ಫೇಸ್ ಬುಕ್ ಪೇಜಿನಲ್ಲಿ ಜೈನ ಧರ್ಮದ ಸ್ವಾಮೀಜಿ ಹಾಗೂ ದೇಶದ ಪ್ರಧಾನಿ ವಿರುದ್ದ ಆಕ್ಷೇಪಾರ್ಹ ಕಮೆಂಟ್ ಹಾಕಿದ ಆರೋಪದಲ್ಲಿ  "ಕರುನಾಡಿನ ಮಿನುಗುವ ನಕ್ಷತ್ರ" ಎಂಬ ಫೇಸ್ ಬುಕ್ ಪೇಜ್ ಹೊಂದಿರುವ ವ್ಯಕ್ತಿಯ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪುತ್ತೂರು ತಾಲೂಕು, ಪಡ್ನೂರು ಗ್ರಾಮದ ನಿವಾಸಿ ಜೀವಂದರ್ ಜೈನ್ (60) ಎಂಬವರು ಈ ಬಗ್ಗೆ‌ ಪೊಲೀಸರಿಗೆ ದೂರು ನೀಡಿದ್ದು,  ಇವರು ಭಾನುವಾರ (ಜೂನ್ 29) ಸಂಜೆ  ಸಾಮಾಜಿಕ ಜಾಲತಾಣವಾದ ಪೇಸ್ ಬುಕ್ ನೋಡುತ್ತಿದ್ದಾಗ, “ಕರುನಾಡಿನ ಮಿನುಗುವ ನಕ್ಷತ್ರ” ಎಂಬ ಪೇಸ್ ಬುಕ್  ಪೇಜ್ ಹೊಂದಿರುವ ವ್ಯಕ್ತಿಯು, ಪೇಸ್ ಬುಕ್ ನಲ್ಲಿ ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡುವ ವೇಳೆ, ಜೈನ ಧರ್ಮದ  ಸ್ವಾಮೀಜಿಗೆ ಹಾಗೂ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳ ಗೌರವಕ್ಕೆ ದಕ್ಕೆ ಉಂಟು ಮಾಡುವ ರೀತಿಯಲ್ಲಿ ಹಾಗೂ ಸಾರ್ವಜನಿಕ ಶಾಂತಿ ನೆಮ್ಮದಿಗೆ ದಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಕಮೆಂಟ್ ಮಾಡಿರುವುದು ಕಂಡುಬಂದಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 50/2025 ಕಲಂ 196(1)(a), 353(2) ಬಿ.ಎನ್.ಎಸ್-2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಫೇಸ್ ಬುಕ್ ಪೇಜಿನಲ್ಲಿ ಜೈನ ಸ್ವಾಮೀಜಿ ಹಾಗೂ ಪ್ರಧಾನಿ ವಿರುದ್ದ ಆಕ್ಷೇಪಾರ್ಹ ಕಮೆಂಟ್ : ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: lk
Scroll to Top