ಮಂಗಳೂರು ಎಂ.ಆರ್.ಪಿ.ಎಲ್. ಘಟಕದಲ್ಲಿ ಅನಿಲ ಸೋರಿಕೆ ದುರಂತ : ಇಬ್ಬರು ನಿರ್ವಾಹಕರು ಮೃತ್ಯು, ಮತ್ತೋರ್ವ ಗಂಭೀರ - Karavali Times ಮಂಗಳೂರು ಎಂ.ಆರ್.ಪಿ.ಎಲ್. ಘಟಕದಲ್ಲಿ ಅನಿಲ ಸೋರಿಕೆ ದುರಂತ : ಇಬ್ಬರು ನಿರ್ವಾಹಕರು ಮೃತ್ಯು, ಮತ್ತೋರ್ವ ಗಂಭೀರ - Karavali Times

728x90

12 July 2025

ಮಂಗಳೂರು ಎಂ.ಆರ್.ಪಿ.ಎಲ್. ಘಟಕದಲ್ಲಿ ಅನಿಲ ಸೋರಿಕೆ ದುರಂತ : ಇಬ್ಬರು ನಿರ್ವಾಹಕರು ಮೃತ್ಯು, ಮತ್ತೋರ್ವ ಗಂಭೀರ

ಮಂಗಳೂರು, ಜುಲೈ 12, 2025 (ಕರಾವಳಿ ಟೈಮ್ಸ್) : ಮಂಗಳೂರಿನ ಎಂಆರ್‍ಪಿಎಲ್ ಘಟಕದಲ್ಲಿ ಅನಿಲ ಸೋರಿಕೆ ದುರಂತ ಉಂಟಾಗಿ ಟ್ಯಾಂಕ್ ಪ್ಲಾಟ್‍ಫಾರ್ಮ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಹಿರಿಯ ನಿರ್ವಾಹಕರು ಸಾವನ್ನಪ್ಪಿದ ಘಟನೆ ಶನಿವಾರ ವರದಿಯಾಗಿದೆ. 

ಮೃತ ನಿರ್ವಾಹಕರನ್ನು ಪ್ರಯಾಗ್ ರಾಜ್ ನಿವಾಸಿ ದೀಪ್ ಚಂದ್ರ (33) ಹಾಗೂ ಕೇರಳದ ಬಿಜಿಲ್ ಪ್ರಸಾದ್ (330 ಎಂದು ಗುರುತಿಸಲಾಗಿದೆ. ಟ್ಯಾಂಕ್ ಪ್ಲಾಟ್ ಫಾರ್ಮ್ ಮೇಲೆ ಇವರು ಕಾರ್ಯನಿರ್ವಹಿಸುತ್ತಿದ್ದ ವೇಳೆ ಎಚ್2ಎಸ್ ಅನಿಲ ಸೋರಿಕೆ ಉಂಟಾಗಿ ಅನಿಲ ಉಸಿರಾಟ ಮಾಡಿದ್ದರಿಂದ ಇವರು ಪ್ರಜ್ಞಾಹೀನ ಸ್ಥಿತಿಗೆ ಬಂದಿದ್ದಾರೆ. ತಕ್ಷಣ ಅವರನ್ನು ಸುರತ್ಕಲ್ ಶ್ರೀನಿವಾಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ರಕ್ಷಣೆಗೆ ಹೋದ ಗದಗದ ವಿನಾಯಕ್ ಎಂಬವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. 

ಎಂಆರ್‍ಪಿಎಲ್ ಅಗ್ನಿಶಾಮಕ ಮತ್ತು ಸುರಕ್ಷತಾ ತಂಡ ಸೋರಿಕೆಯನ್ನು ಸರಿಪಡಿಸಿದೆ ಮತ್ತು ಈಗ ಅದು ಸ್ಪಷ್ಟವಾಗಿದೆ ಎಂದು ತಿಳಿದು ಬಂದಿದೆ. 

ಮೃತರ ಕುಟುಂಬಿಕರ ಅಥವಾ ಸಂಬಂಧಿಕರ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಎಂ.ಆರ್.ಪಿ.ಎಲ್. ಘಟಕದಲ್ಲಿ ಅನಿಲ ಸೋರಿಕೆ ದುರಂತ : ಇಬ್ಬರು ನಿರ್ವಾಹಕರು ಮೃತ್ಯು, ಮತ್ತೋರ್ವ ಗಂಭೀರ Rating: 5 Reviewed By: karavali Times
Scroll to Top