ಬಂಟ್ವಾಳದಲ್ಲಿ ಮಳೆ ಬಿರುಸು : ಹೆದ್ದಾರಿ ಬದಿ ಮಣ್ಣು ಕುಸಿತ, ಮನೆಗೆ ಹಾನಿ - Karavali Times ಬಂಟ್ವಾಳದಲ್ಲಿ ಮಳೆ ಬಿರುಸು : ಹೆದ್ದಾರಿ ಬದಿ ಮಣ್ಣು ಕುಸಿತ, ಮನೆಗೆ ಹಾನಿ - Karavali Times

728x90

28 August 2025

ಬಂಟ್ವಾಳದಲ್ಲಿ ಮಳೆ ಬಿರುಸು : ಹೆದ್ದಾರಿ ಬದಿ ಮಣ್ಣು ಕುಸಿತ, ಮನೆಗೆ ಹಾನಿ

ಬಂಟ್ವಾಳ, ಆಗಸ್ಟ್ 28, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಅಮ್ಟಾಡಿ ಗ್ರಾಮದ ಪೆದಮಲೆ ಎಂಬಲ್ಲಿ ಬಂಟ್ವಾಳ-ಸಿದ್ದಕಟ್ಟೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಬದಿಯಲ್ಲಿ ಮಣ್ಣು ಕುಸಿದಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಪಿಡಬ್ಲ್ಯೂಡಿ ಇಲಾಖಾಧಿಕಾರಿಗಳು ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ. ಮೂಡುನಡುಗೋಡು ಗ್ರಾಮದ ದಂಡೆ ಮಜಲು ನಿವಾಸಿ ರಾಮಣ್ಣ ನಾಯಕ್ ಬಿನ್ ನಾರಣಪ್ಪ ನಾಯಕ್ ಅವರ ಕಚ್ಚಾ ಮನೆಗೆ ತೀವ್ರ ಹಾನಿಯಾಗಿದೆ. ಮನೆ ಮಂದಿಯನ್ನು ಸಮೀಪದ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮಳೆ ಬಿರುಸು : ಹೆದ್ದಾರಿ ಬದಿ ಮಣ್ಣು ಕುಸಿತ, ಮನೆಗೆ ಹಾನಿ Rating: 5 Reviewed By: karavali Times
Scroll to Top