ಶಾಲಾ ಆವರಣದಲ್ಲಿ ಅಪಾಯಕಾರಿ ಮರ ತೆರವಿಗೆ ಶಾಲಾಡಳಿತ ನಿರ್ಲಕ್ಷ್ಯ : ವಿದ್ಯಾರ್ಥಿಗಳ ಹಿತ ರಕ್ಷಣೆ ಮಾಡುವವರು ಯಾರು ಎಂಬುದೇ ಯಕ್ಷ ಪ್ರಶ್ನೆ - Karavali Times ಶಾಲಾ ಆವರಣದಲ್ಲಿ ಅಪಾಯಕಾರಿ ಮರ ತೆರವಿಗೆ ಶಾಲಾಡಳಿತ ನಿರ್ಲಕ್ಷ್ಯ : ವಿದ್ಯಾರ್ಥಿಗಳ ಹಿತ ರಕ್ಷಣೆ ಮಾಡುವವರು ಯಾರು ಎಂಬುದೇ ಯಕ್ಷ ಪ್ರಶ್ನೆ - Karavali Times

728x90

23 August 2025

ಶಾಲಾ ಆವರಣದಲ್ಲಿ ಅಪಾಯಕಾರಿ ಮರ ತೆರವಿಗೆ ಶಾಲಾಡಳಿತ ನಿರ್ಲಕ್ಷ್ಯ : ವಿದ್ಯಾರ್ಥಿಗಳ ಹಿತ ರಕ್ಷಣೆ ಮಾಡುವವರು ಯಾರು ಎಂಬುದೇ ಯಕ್ಷ ಪ್ರಶ್ನೆ

ಬಂಟ್ವಾಳ, ಆಗಸ್ಟ್ 23, 2025 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆ ಎಂಬಲ್ಲಿ ಖಾಸಗಿ ಪ್ರೌಢಶಾಲೆ ಆವರಣದಲ್ಲಿ ಅಪಾಯಕಾರಿ ಮರವೊಂದು ಶಾಲಾ ಮಕ್ಕಳ ಸಹಿತ ಸಾರ್ವಜನಿಕರ ಪಾಲಿಗೆ ಆತಂಕದ ಪರಿಸ್ಥಿತಿ ನಿರ್ಮಿಸಿದೆ. 

ಮರದ ರೆಂಬೆ-ಕೊಂಬೆಗಳು ಪರಿಸರದಲ್ಲಿ ಹರಡಿದ್ದು, ಶಾಲಾ ಕಟ್ಟಡದ ಮಾಡು, ಪರಿಸರದ ಪುರಸಭಾ ಕಟ್ಟಡ ಸಹಿತ ಶಾಲಾ ವಿದ್ಯಾರ್ಥಿಗಳು ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನ, ಸಾರ್ವಜನಿಕರ ಮೇಲೆ ಮುರಿದು ಬೀಳುವ ಅಪಾಯ ಎದುರಾಗಿದೆ. ಮರದ ಕೊಂಬೆಗಳು ವಾಲಿಕೊಂಡಿರುವ ಪರಿಸರದಲ್ಲೇ ನಿತ್ಯವೂ ವಿದ್ಯಾರ್ಥಿಗಳ ಓಡಾಟ ಇದ್ದು, ಮಳೆ-ಗಾಳಿಗೆ ಮರದ ಕೊಂಬೆಗಳು ಮುರಿದು ಬಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಶಾಲಾಡಳಿತ ಮಂಡಳಿ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಪುರಸಭಾಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರ್ ಅವರಿಗೂ ಮನವಿ ಸಲ್ಲಿಸಿದರೂ ಈ ಬಗ್ಗೆ ಇನ್ನೂ ಕೂಡಾ ಯಾರೂ ಗಮನ ಹರಿಸದೆ ಇರುವ ಪರಿಣಾಮ ಅಪಾಯದ ಕರೆಗಂಟೆ ಮುಂದುವರಿದಿದೆ. ಮಳೆ ಬಿರುಸು ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಗಳು ಮುಂದುವರಿದಿರುವ ಹಿನ್ನಲೆಯಲ್ಲಿ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಶಾಲಾ ಆವರಣದಲ್ಲಿ ಅಪಾಯಕಾರಿ ಮರ ತೆರವಿಗೆ ಶಾಲಾಡಳಿತ ನಿರ್ಲಕ್ಷ್ಯ : ವಿದ್ಯಾರ್ಥಿಗಳ ಹಿತ ರಕ್ಷಣೆ ಮಾಡುವವರು ಯಾರು ಎಂಬುದೇ ಯಕ್ಷ ಪ್ರಶ್ನೆ Rating: 5 Reviewed By: karavali Times
Scroll to Top