ದಸರಾ ಉದ್ಘಾಟಿಸಿದ್ದ ಸಾಹಿತಿ ಬಾನು ಮುಷ್ತಾಕ್ ಹಾಗೂ ಸಿಎಂ ವಿರುದ್ದ ಫೇಸ್ ಬುಕ್ ಮೂಲಕ ಅಸಭ್ಯ ಪದ ಬಳಸಿ ನಿಂದನೆ : ಆರೋಪಿ ಸುಳ್ಯ ಪೊಲೀಸರ ಬಲೆಗೆ - Karavali Times ದಸರಾ ಉದ್ಘಾಟಿಸಿದ್ದ ಸಾಹಿತಿ ಬಾನು ಮುಷ್ತಾಕ್ ಹಾಗೂ ಸಿಎಂ ವಿರುದ್ದ ಫೇಸ್ ಬುಕ್ ಮೂಲಕ ಅಸಭ್ಯ ಪದ ಬಳಸಿ ನಿಂದನೆ : ಆರೋಪಿ ಸುಳ್ಯ ಪೊಲೀಸರ ಬಲೆಗೆ - Karavali Times

728x90

30 October 2025

ದಸರಾ ಉದ್ಘಾಟಿಸಿದ್ದ ಸಾಹಿತಿ ಬಾನು ಮುಷ್ತಾಕ್ ಹಾಗೂ ಸಿಎಂ ವಿರುದ್ದ ಫೇಸ್ ಬುಕ್ ಮೂಲಕ ಅಸಭ್ಯ ಪದ ಬಳಸಿ ನಿಂದನೆ : ಆರೋಪಿ ಸುಳ್ಯ ಪೊಲೀಸರ ಬಲೆಗೆ

ಸುಳ್ಯ, ಅಕ್ಟೋಬರ್ 30, 2025 (ಕರಾವಳಿ ಟೈಮ್ಸ್) : ದಸರಾ ಉದ್ಘಾಟಿಸಿದ್ದ ಹಿರಿಯ ಸಾಹಿತಿ ಬಾನು ಮುಶ್ತಾಕ್ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ವಿರುದ್ದ ಫೇಸ್ ಬುಕ್ ಮೂಲಕ ಅಸಭ್ಯ ಪದಗಳಿಂದ ನಿಂದಿಸಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಬರಿಮಾರು ನಿವಾಸಿ ಪುರುಷೋತ್ತಮ ಆಚಾರ್ಯ ಬರಿಮಾರು ಎಂದು ಹೆಸರಿಸಲಾಗಿದೆ. 

ಈತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪುರುಷ ಆಚಾರ್ಯ ಎಂಬ ಹೆಸರಿನ ಖಾತೆಯಿಂದ ದಸರಾ ಉದ್ಘಾಟನೆ ಮಾಡಿದ ಬಾನು ಮುಸ್ತಾಕ್ ಅವರ ಬಗ್ಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಅಸಭ್ಯ ಪದಗಳಲ್ಲಿ ನಿಂದಿಸಿ ಪೆÇೀಸ್ಟ್ ಮಾಡಿದ್ದ. ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2025 ಕಲಂ 296, 196, 354 ಬಿ ಎನ್ ಎಸ್ ಹಾಗೂ ಸುಬ್ರಮಣ್ಯ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2025 ಕಲಂ 353(3), 353(4) ಬಿ ಎನ್ ಎಸ್ ಪ್ರಕಾರ ಪ್ರಕರಣಗಳು ದಾಖಲಾಗಿತ್ತು. 

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ಘಟಕದ  ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸಹಕಾರದಿಂದ ಸುಳ್ಯ ಪೆÇಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಅವರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ದಸರಾ ಉದ್ಘಾಟಿಸಿದ್ದ ಸಾಹಿತಿ ಬಾನು ಮುಷ್ತಾಕ್ ಹಾಗೂ ಸಿಎಂ ವಿರುದ್ದ ಫೇಸ್ ಬುಕ್ ಮೂಲಕ ಅಸಭ್ಯ ಪದ ಬಳಸಿ ನಿಂದನೆ : ಆರೋಪಿ ಸುಳ್ಯ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top