ವಿದ್ಯಾರ್ಥಿಗಳಿಗೆ ಅವಕಾಶ ಬಳಸಿಕೊಳ್ಳಲು ಪೋಷಕರ ಸಹಕಾರ ಅಗತ್ಯ : ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರೈ - Karavali Times ವಿದ್ಯಾರ್ಥಿಗಳಿಗೆ ಅವಕಾಶ ಬಳಸಿಕೊಳ್ಳಲು ಪೋಷಕರ ಸಹಕಾರ ಅಗತ್ಯ : ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರೈ - Karavali Times

728x90

28 November 2025

ವಿದ್ಯಾರ್ಥಿಗಳಿಗೆ ಅವಕಾಶ ಬಳಸಿಕೊಳ್ಳಲು ಪೋಷಕರ ಸಹಕಾರ ಅಗತ್ಯ : ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರೈ

ಬಂಟ್ವಾಳ, ನವೆಂಬರ್ 28, 2025 (ಕರಾವಳಿ ಟೈಮ್ಸ್) : ಬದುಕಿನಲ್ಲಿ ದೊರೆಯುವ ಅವಕಾಶಗಳನ್ನು ಬಳಸಿಕೊಳ್ಳಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಮಕ್ಕಳು ಅದನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಹಕಾರಿಯಾಗುತ್ತದೆ ಎಂದು ಮಂಗಳೂರಿನ ಎನ್ ಸಿ ಸಿ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರೈ ಹೇಳಿದರು. 

ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಎಸ್ ವಿ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕಿ ಶ್ರೀಮತಿ ಕೆ ರೇಖಾ ಶೆಣೈ ಅಧ್ಯಕ್ಷತೆ ವಹಿಸಿದ್ದರು.  ಪ್ರಾಂಶುಪಾಲೆ ಶ್ರೀಮತಿ ಪೂರ್ಣೇಶ್ವರಿ ಭಟ್ ಕೆ ಶಾಲಾ ವಾರ್ಷಿಕ ವರದಿ ವಾಚಿಸಿದರು. ಶಾಲಾ ಸಂಯೋಜನಾಧಿಕಾರಿ ಶ್ರೀಮತಿ ಜೂಲಿಯಾನ ಡಿ’ಸೋಜ ಉಪಸ್ಥಿತರಿದ್ದರು. ಶ್ರೀಮತಿ ಅನಿತಾ ಡಿ’ಸೋಜ ಅತಿಥಿ ಪರಿಚಯ ಮಾಡಿದರು. ಶ್ರೀಮತಿ ದಿವ್ಯ ಮತ್ತು ಶ್ರೀಮತಿ ಮರಿಯಾ ರೊಲಿಟಾ ಡಿ’ಸೋಜ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮನೋಹರ ಎಸ್ ದೊಡ್ಡಮನಿ ಸ್ವಾಗತಿಸಿ, ಶ್ರೀಮತಿ ಶುಭಲತಾ ವಂದಿಸಿದರು. ಅನನ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿವಾನ್ ಮೆಲ್ರಿಕ್ ಮೆನೇಜಸ್ ಹಾಗೂ ಧೃತಿ ಎಚ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. 

  • Blogger Comments
  • Facebook Comments

0 comments:

Post a Comment

Item Reviewed: ವಿದ್ಯಾರ್ಥಿಗಳಿಗೆ ಅವಕಾಶ ಬಳಸಿಕೊಳ್ಳಲು ಪೋಷಕರ ಸಹಕಾರ ಅಗತ್ಯ : ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರೈ Rating: 5 Reviewed By: karavali Times
Scroll to Top