ಮಂಗಳೂರು ನಗರ ಸಮಸ್ಯೆಗಳ ಬಗ್ಗೆ ಐವನ್ ಡಿಸೋಜಾ ಅಧಿಕಾರಿಗಳ ಜೊತೆ ಚರ್ಚೆ - Karavali Times ಮಂಗಳೂರು ನಗರ ಸಮಸ್ಯೆಗಳ ಬಗ್ಗೆ ಐವನ್ ಡಿಸೋಜಾ ಅಧಿಕಾರಿಗಳ ಜೊತೆ ಚರ್ಚೆ - Karavali Times

728x90

24 December 2025

ಮಂಗಳೂರು ನಗರ ಸಮಸ್ಯೆಗಳ ಬಗ್ಗೆ ಐವನ್ ಡಿಸೋಜಾ ಅಧಿಕಾರಿಗಳ ಜೊತೆ ಚರ್ಚೆ

ಮಂಗಳೂರು, ಡಿಸೆಂಬರ್ 24, 2025 (ಕರಾವಳಿ ಟೈಮ್ಸ್) : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಶಾಸಕರ ಕಛೇರಿಯಲ್ಲಿ ಮಂಗಳೂರು ನಗರದ ಕದ್ರಿ, ಉರ್ವ, ಕಂಕನಾಡಿ ಮಾರುಕಟ್ಟೆಗಳ ಅವ್ಯವಸ್ಥೆಗಳ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಇಂಜಿನಿಯರ್ ಗಳೊಂದಿಗೆ ಸಮಾಲೋಚನೆ ಸಭೆ ನಡೆಯಿತು. 

ಮಂಗಳೂರು ನಗರದ ಕದ್ರಿ ಉರ್ವ ಕಂಕನಾಡಿ ಮಾರುಕಟ್ಟೆಗಳ ಕಾಮಗಾರಿ ಮುಗಿದು ಅನೇಕ ವರ್ಷಗಳು ಕಳೆದರೂ ಸಾರ್ವಜನಿಕರಿಗೆ ಬಿಟ್ಟು ಕೊಡದೇ ಹಣ ಪೆÇೀಲಾಗುತ್ತಿದ್ದು, ಕಟ್ಟಡ ನಿರ್ಮಿಸಲು ಸಾಲ ಪಡೆದು ಬಡ್ಡಿಯು ಇಮ್ಮಡಿಯಾಗುತ್ತಿದೆ. ಈ ಬಗ್ಗೆ ಕೂಡಲೇ ಮೂರು ಮಾರುಕಟ್ಟೆಗಳನ್ನು  ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಇರುವ ಬಗ್ಗೆ ಹಾಗೂ ಸಮಸ್ಯೆಗಳ ಮಹಾನಗರ ಪಾಲಿಕೆಯ ಅಧಿಕಾರಿಗಳಾದ ನರೇಶ್ ಶೆಣೈ ಡಿ.ಸಿಆರ್ ಅಕ್ಷತಾ, ಕಂದಾಯ ಅಧಿಕಾರಿ ವಿಜಯಕುಮಾರ್ ಹಾಗೂ ಎಇಇ ಅವರೊಂದಿಗೆ ಸಮಸ್ಯೆಗಳ ಸಮಾಲೋಚನೆ ನಡೆಸಿ, ಕೂಡಲೇ ಮಾರುಕಟ್ಟೆಗಳನ್ನು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. 

ಜನವರಿ 30 ರಂದು ಮಂಗಳೂರಿನ ಕರಾವಳಿಉತ್ಸವದ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ನಿರ್ಧರಿಸಲಾಯಿತು. ಮಹಾತ್ಮ ಗಾಂಧಿ ವಿಕಾಸ ಯೋಜನೆಯ ಅಭಿವೃದ್ದಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ನೇರವೇರಿಸಲು ತೀರ್ಮಾನಿಸಲಾಯಿತು.

ನಗರದ ಮಹಾಕಾಳಿಪಡ್ಪುನಲ್ಲಿರುವ ಅಂಡರ್ ಪಾಸ್ ಇನ್ನೂ ಸಾರ್ವಜನಿಕರ ಪ್ರಯಾಣಕ್ಕೆ ಅಡ್ಡಿಪಡಿಸುವ ಅಧಿಕಾರಿ ಮೇಲೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮಹಾಕಾಳಿಪಡ್ಪು ಅಂಡರ್ ಪಾಸ್ ರೈಲ್ವೆ ಬ್ರಿಡ್ಜ್ ಬಳಿ ಪ್ರತಿಭಟನೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಐವನ್ ಡಿಸೋಜಾ ತಿಳಿಸಿದ್ದಾರೆ.

ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಈ ಬಗ್ಗೆ  ಸೂಚನೆಯನ್ನು ಐವನ್ ಡಿಸೋಜಾ ನೀಡಿದರು. ಮಂಗಳೂರು ನಗರದಲ್ಲಿ ಸಂಚಾರಿ ವ್ಯವಸ್ಥೆಯು ತೀರಾ ಅವ್ಯವಸ್ಥೆಯಿಂದ ಕೂಡಿದ್ದು, ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಐವನ್ ಡಿಸೋಜಾರವರು ಮಹಾನಗರ ಪಾಲಿಕೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ನಗರ ಸಮಸ್ಯೆಗಳ ಬಗ್ಗೆ ಐವನ್ ಡಿಸೋಜಾ ಅಧಿಕಾರಿಗಳ ಜೊತೆ ಚರ್ಚೆ Rating: 5 Reviewed By: karavali Times
Scroll to Top