ಮಂಗಳೂರು, ಡಿಸೆಂಬರ್ 24, 2025 (ಕರಾವಳಿ ಟೈಮ್ಸ್) : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುತ್ತಿರುವ 8 ಮಂದಿಗೆ 4,41,118/- ರೂಪಾಯಿ ಪರಿಹಾರ ಧನ ಮಂಜೂರುಗೊಂಡಿದೆ.
ಯಷರ್ಧನ್ ಎಂ. ಮಣ್ಣಗುಡ್ಡ ಅವರಿಗೆ 92,429/- ರೂಪಾಯಿ, ಮನೋಹರ್ ಮಾಬೆನ್ ಬೋಳಾರ ಅವರಿಗೆ 91,690/- ರೂಪಾಯಿ, ರವಿಶಂಕರ್ ಕಾಟಿಪಳ್ಳ ಅವರಿಗೆ 76,157/- ರೂಪಾಯಿ, ನಿಶ್ಚಲ್ ಶಕ್ತಿನಗರ ಅವರಿಗೆ 70 ಸಾವಿರ ರೂಪಾಯಿ, ಶ್ರೀಮತಿ ಮ್ಯಾಗ್ದಲಿನ್ ಮಾಡ್ತಾ ಪಳ್ನೀರ್ ಅವರಿಗೆ 54,503/- ರೂಪಾಯಿ, ಉಸ್ಮಾನ್ ಮೂಡಬಿದ್ರಿ ಅವರಿಗೆ 41,021/- ರೂಪಾಯಿ, ಗುಡ್ಡೆ ಅಬ್ದುಲ್ ರೆಹೆಮಾನ್ ಅಡ್ಡೂರು ಅವರಿಗೆ 10,318/- ರೂಪಾಯಿ, ಅಯಿಷಾ ಪರ್ವಿನ್ ಅಡ್ಯಾರ್ ಅವರಿಗೆ 5 ಸಾವಿರ ರೂಪಾಯಿ ಪರಿಹಾರ ಧನ ಮಂಜೂರಾಗಿದೆ. ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ಹಸ್ತಾಂತರಿಸಲಾಂಯಿತು.



















0 comments:
Post a Comment