ತಣ್ಣೀರುಪಂಥ : ಚಾಲಕನ ನಿಯಂತ್ರಣ ಮೀರಿ ಸೇತುವೆ ಮೇಲಿಂದ ಹೊಳೆಗೆ ಬಿದ್ದ ಕಾರು - Karavali Times ತಣ್ಣೀರುಪಂಥ : ಚಾಲಕನ ನಿಯಂತ್ರಣ ಮೀರಿ ಸೇತುವೆ ಮೇಲಿಂದ ಹೊಳೆಗೆ ಬಿದ್ದ ಕಾರು - Karavali Times

728x90

6 January 2026

ತಣ್ಣೀರುಪಂಥ : ಚಾಲಕನ ನಿಯಂತ್ರಣ ಮೀರಿ ಸೇತುವೆ ಮೇಲಿಂದ ಹೊಳೆಗೆ ಬಿದ್ದ ಕಾರು

ಬಂಟ್ವಾಳ, ಜನವರಿ 06, 2026 (ಕರಾವಳಿ ಟೈಮ್ಸ್) : ಕಾರೊಂದು ಚಾಲಕನ ನಿಯಂತ್ರಣ ಮೀರಿ ಸೇತುವೆ ಮೇಲಿಂದ ಹೊಳೆಗೆ ಬಿದ್ದ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂಥ ಗ್ರಾಮದ ಬಾಯ್ತಾರು ಸೇತುವೆ ಬಳಿ ಡಿ 4 ರಂದು ಮಧ್ಯಾಹ್ನ ವೇಳೆ ಸಂಭವಿಸಿದೆ.

ಜೈನುದ್ದೀನ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಚಾಲಕನ ನಿಯಂತ್ರಣ ಮೀರಿ ಸೇತುವೆ ಮೇಲಿಂದ ಹೊಳೆಗೆ ಬಿದ್ದಿದ್ದು, ಪ್ರಯಾಣಿಕರು ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಮಹಮ್ಮದ್ ಶಾಕೀರ್ ಬಿ ಎಂಬವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ತಣ್ಣೀರುಪಂಥ : ಚಾಲಕನ ನಿಯಂತ್ರಣ ಮೀರಿ ಸೇತುವೆ ಮೇಲಿಂದ ಹೊಳೆಗೆ ಬಿದ್ದ ಕಾರು Rating: 5 Reviewed By: karavali Times
Scroll to Top