ಮತದಾನದ ಮಹತ್ವ ಅರಿತುಕೊಂಡು ಮತ ಚಲಾಯಿಸಿ ಸಂವಿಧಾನದ ಮೌಲ್ಯ ಕಾಪಾಡೋಣ : ತಹಶೀಲ್ದಾರ್ ಮಂಜುನಾಥ್ - Karavali Times ಮತದಾನದ ಮಹತ್ವ ಅರಿತುಕೊಂಡು ಮತ ಚಲಾಯಿಸಿ ಸಂವಿಧಾನದ ಮೌಲ್ಯ ಕಾಪಾಡೋಣ : ತಹಶೀಲ್ದಾರ್ ಮಂಜುನಾಥ್ - Karavali Times

728x90

23 January 2026

ಮತದಾನದ ಮಹತ್ವ ಅರಿತುಕೊಂಡು ಮತ ಚಲಾಯಿಸಿ ಸಂವಿಧಾನದ ಮೌಲ್ಯ ಕಾಪಾಡೋಣ : ತಹಶೀಲ್ದಾರ್ ಮಂಜುನಾಥ್

ಬಂಟ್ವಾಳದಲ್ಲಿ ಮತದಾರರ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ವಿಧಿ ಬೋಧನೆ


ಬಂಟ್ವಾಳ, ಜನವರಿ 23, 2026 (ಕರಾವಳಿ ಟೈಮ್ಸ್) : ಚುನಾವಣಾ ಆಯೋಗದ ಆದೇಶದಂತೆ ಮತದಾರರ ದಿನಾಚರಣೆಯ ಪ್ರಯುಕ್ತ ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಜಿ ಮಂಜುನಾಥ್ ಅವರು, ಭಾರತದ ಪೌರರಾದ ನಾವೆಲ್ಲರೂ ಮತದಾನದ ಮಹತ್ವವನ್ನು ಅರಿತು ಜವಾಬ್ದಾರಿಯುತ ಪ್ರಜೆಗಳಾಗಿ ಮತ ಚಲಾಯಿಸಬೇಕು. ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಬದ್ಧರಾಗಿರಬೇಕು ಎಂದರು. 

ಚುನಾವಣಾ ಉಪತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಮ್ತಾಜ್, ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ನರೇಂದ್ರ ನಾಥ್ ಮಿತ್ತೂರು, ಉಪತಹಶೀಲ್ದಾರ್ ದಿವಾಕರ ಮುಗುಳಿಯ, ಚುನಾವಣಾ ಸಿಬ್ಬಂದಿ ಕಿರಣ್ ಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು, ಸಾರ್ವಜನಿಕರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮತದಾನದ ಮಹತ್ವ ಅರಿತುಕೊಂಡು ಮತ ಚಲಾಯಿಸಿ ಸಂವಿಧಾನದ ಮೌಲ್ಯ ಕಾಪಾಡೋಣ : ತಹಶೀಲ್ದಾರ್ ಮಂಜುನಾಥ್ Rating: 5 Reviewed By: karavali Times
Scroll to Top