ಫೆ 10 ರಂದು ಬಂಟ್ವಾಳ ಪ್ರವೇಶಿಸಲಿರುವ ಜಿಲ್ಲಾ ಕಾಂಗ್ರೆಸ್ ನರೇಗಾ ಬಚಾವೋ ಸಂಗ್ರಾಮ ಯಶಸ್ಸಿಗೆ ರೈ ಕರೆ - Karavali Times ಫೆ 10 ರಂದು ಬಂಟ್ವಾಳ ಪ್ರವೇಶಿಸಲಿರುವ ಜಿಲ್ಲಾ ಕಾಂಗ್ರೆಸ್ ನರೇಗಾ ಬಚಾವೋ ಸಂಗ್ರಾಮ ಯಶಸ್ಸಿಗೆ ರೈ ಕರೆ - Karavali Times

728x90

6 February 2026

ಫೆ 10 ರಂದು ಬಂಟ್ವಾಳ ಪ್ರವೇಶಿಸಲಿರುವ ಜಿಲ್ಲಾ ಕಾಂಗ್ರೆಸ್ ನರೇಗಾ ಬಚಾವೋ ಸಂಗ್ರಾಮ ಯಶಸ್ಸಿಗೆ ರೈ ಕರೆ

ಬಂಟ್ವಾಳ, ಫೆಬ್ರವರಿ 06, 2026 (ಕರಾವಳಿ ಟೈಮ್ಸ್) : ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಸಮಿತಿ ಸಭೆಯು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಫೆಬ್ರವರಿ 9 ರಿಂದ 12 ರ ತನಕ ಸುಳ್ಯದಿಂದ ಮುಲ್ಕಿವರೆಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆಯುವ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ  ಗ್ರಾಮೀಣ ಜನರಿಗೆ ಮಾರಕವಾಗಿರುವ ವಿಬಿ ಜಿ ರಾಮ್ ಜಿ ಯೋಜನೆ ರದ್ದುಪಡಿಸಿ ಮನರೇಗಾ ಮರು ಸ್ಥಾಪಿಸುವ ನರೇಗಾ ಬಚಾವೋ ಸಂಗ್ರಾಮದ ಬೃಹತ್ ಪಾದಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು. 

ಯಾತ್ರೆಯು ಫೆ 10 ರಂದು ಸಂಜೆ ವೇಳೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆಟ್ಲಮುಡ್ನೂರು ಗ್ರಾಮದ ಕುಕ್ಕರಬೆಟ್ಟುವಿಗೆ ತಲುಪಲಿದೆ. ಅಲ್ಲಿ ಯಾತ್ರೆಗೆ ಭವ್ಯ ಸ್ವಾಗತ ಮಾಡಿದ ಬಳಿಕ ರಾತ್ರಿ 7 ಗಂಟೆಗೆ ನೇರಳಕಟ್ಟೆಯಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಮಾತನಾಡಿ, ಕಾರ್ಯಕರ್ತರು ಪಕ್ಷ ಸಂಘಟನೆ ಮಾಡುವ ಮೂಲಕ ಮುಂಬರುವ ಚುನಾವಣೆ ಎದುರಿಸಲು ಸನ್ನದ್ಧರಾಗಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮುಹಮ್ಮದ್, ಪಕ್ಷ ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಫಾರೂಕ್ ಬಯಬೆ, ಹನೀಫ್ ಪೆರ್ಲಾಪು, ಐಡಾ ಸುರೇಶ್, ಜಯಂತಿ ಪೂಜಾರಿ, ಸಮಿತಾ ಡಿ ಪೂಜಾರಿ, ಸತೀಶ್ ಪೂಜಾರಿ, ಶ್ರೀಧರ ರೈ, ದೇರಣ್ಣ ಪೂಜಾರಿ, ಪ್ರಕಾಶ್ ರೈ, ಲತೀಫ್ ಪಂತಡ್ಕ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. 

ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಲತೀಫ್ ಸ್ವಾಗತಿಸಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಫೆ 10 ರಂದು ಬಂಟ್ವಾಳ ಪ್ರವೇಶಿಸಲಿರುವ ಜಿಲ್ಲಾ ಕಾಂಗ್ರೆಸ್ ನರೇಗಾ ಬಚಾವೋ ಸಂಗ್ರಾಮ ಯಶಸ್ಸಿಗೆ ರೈ ಕರೆ Rating: 5 Reviewed By: karavali Times
Scroll to Top